ಬಾಂಬ್‌ ಸ್ಫೋಟ ಬೆದರಿಕೆ ಟ್ವೀಟ್:‌ ಹರ್ಯಾಣ ಯುವಕ ಬಂಧನ

ಮುಂಬೈ: ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಯುವ ಕುರಿತು ಟ್ವೀಟ್‌ ಮಾಡಿದ ಹರಿಯಾಣ ಮೂಲಕ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
೧೯ ವರ್ಷ್‌ ಬನ್ವಾರಿ ಸಿಂಗ್‌ ಬಂಧಿತ ಯುವಕ. ಆತ ಟ್ವೀಟ್‌ನಲ್ಲಿ ಹಿಂದಿ ಚಲನಚಿತ್ರ “ಮೇಡಮ್‌ ಮುಖ್ಯಮಂತ್ರಿʼ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಮಲಾಡ್‌, ಅಂಧೇರಿ, ಪಾಲ್ಘರ್‌ನ ವಸೈನ ೭ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಯಲಿದೆ ಎಂದು ಟ್ವೀಟ್‌ ಮಾಡಿದ್ದ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ನಿಮ್ಮ ಕಾಮೆಂಟ್ ಬರೆಯಿರಿ

advertisement