ಗಂಡನ ಕೊಂದು, ದೇಹ ಕತ್ತರಿಸಿ, ಕರುಳು ಹೊರತೆಗೆದು ಚೀಲದಲ್ಲಿ ತುಂಬುತ್ತಿದ್ದ ಪತ್ನಿ; ಮನೆ ಮಾಲೀಕ ಕಂಡಾಗ ಕಟ್ಟಡದಿಂದ ಜಿಗಿದಳು…

ಕುರುಕ್ಷೇತ್ರ  :  ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯನ್ನು ಕ್ರೂರವಾಗಿ ಹತ್ಯೆ ಮಾಡಿ, ಆತನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ಹೊರತೆಗೆದಿರುವ ಆರೋಪಿತ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಬಳಿಕ ಘಟನೆ ಬಹಿರಂಗವಾಗುತ್ತಿದ್ದಂತೆ ಆತಂಕಗೊಂಡ ಆಕೆ ಬಾಡಿಗೆ ಮನೆಯ ಮಹಡಿಯಿಂದ ಜಿಗಿದಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮೃತ ವ್ಯಕ್ತಿಯನ್ನು … Continued

ಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು

ಸೋನಿಪತ್ (ಹರಿಯಾಣ) : ತಮ್ಮ ಜೀವನವನ್ನೇ ಮೂವರು ಪುತ್ರಿಯರ ಶಿಕ್ಷಣ, ಭವಿಷ್ಯ ಮತ್ತು ಸುಖಕ್ಕಾಗಿ ಮುಡಿಪಾಗಿಟ್ಟಿದ್ದ ತಂದೆಯೊಬ್ಬರು ಹರಿಯಾಣದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದು, ಅವರ ಅಂತ್ಯಕ್ರಿಯೆಗೆ ಮೂವರು ಪುತ್ರಿಯರೂ ಬರಲಿಲ್ಲ. ಬದಲಾಗಿ, ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿದ್ದ ಅವರು ವಿಡಿಯೊ ಕಾಲ್ ಮೂಲಕ ತಂದೆಯ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದ ಘಟನೆ ನಡೆದಿದೆ. ಮುಂಬೈ ಮೂಲದ … Continued

ಭೀಕರ ಕೊಲೆ ; 2 ತಿಂಗಳ ಸಂಚು… ಶಿಕ್ಷಕಿಗೆ 27 ಬಾರಿ ಚಾಕುವಿನಿಂದ ಇರಿದು ಕೊಂದ ಆರೋಪಿ

ಫರಿದಾಬಾದ್: ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಶಿಕ್ಷಕಿಯೊಬ್ಬರನ್ನು ವ್ಯಕ್ತಿಯೊಬ್ಬ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಹಾಡಹಗಲೇ ಶಾಲಾ ಆವರಣದಲ್ಲೇ ನಡೆದ ಈ ಭೀಕರ ಕೃತ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು, ಆತನನ್ನು … Continued

ಭೀಕರ ದುರಂತ: 6 ದಿನ ಸಾಹಸದಿಂದ ಜನರನ್ನು ರಂಜಿಸಿದ್ದ ವ್ಯಕ್ತಿ ‘ಜೀವಂತ ಸಮಾಧಿ’ ಸಾಹಸ ಪ್ರದರ್ಶನದಲ್ಲಿ ಸಾವು

ನೂಹ್ : ಸೈಕಲ್ ಸಾಹಸ ಪ್ರದರ್ಶನದಲ್ಲಿ ನಡೆದ ಅಪಾಯಕಾರಿ “ಜೀವಂತ ಸಮಾಧಿ” ಸಾಹಸ ಪ್ರದರ್ಶನ ದುರಂತದಲ್ಲಿ ಅಂತ್ಯಗೊಂಡಿದ್ದು, 27 ವರ್ಷದ ಸೈಕಲ್ ಸಾಹಸ ಕಲಾವಿದ ಮೃತಪಟ್ಟಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದಿದೆ. ನೂಹ್ ಜಿಲ್ಲೆಯ ತೌರು (Taoru) ಉಪವಿಭಾಗದ ಖೋರಿ ಕಲಾನ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸೈಕಲ್ ಸರ್ಕಸ್ ನಡೆಯುತ್ತಿತ್ತು. ಈ ಸರ್ಕಸ್‌ನಲ್ಲಿ … Continued

ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಗುರುವಾರ ಪಕ್ಷದ ಸಂಘಟನಾತ್ಮಕ ವಿಭಾಗದಲ್ಲಿ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದ್ದು, ದೇಶದ ಪ್ರಮುಖ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಪಂಜಾಬ್, ಹರಿಯಾಣ, ದೆಹಲಿ ಮತ್ತು ತ್ರಿಪುರಾ ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ಕುರಿತು ಪಕ್ಷದ … Continued

ಅಡ್ಡಮತದಾನ ಮಾಡಿದ ಐವರು ಶಾಸಕರು ಕಾಂಗ್ರೆಸ್ಸಿನಿಂದ ಅಮಾನತು

ಗುರುಗ್ರಾಮ: ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ (Cross-voting) ಮಾಡಿದ ಆರೋಪದ ಮೇಲೆ ಹರಿಯಾಣದ ಐವರು ಕಾಂಗ್ರೆಸ್ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಗುರುವಾರ ಅಮಾನತುಗೊಳಿಸಲಾಗಿದೆ. ಈ ಅಡ್ಡಮತದಾನದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಕರಮವೀರ ಬೌಧ್ ಅವರ ಗೆಲುವು ಬಹುತೇಕ ಕೈತಪ್ಪುವ ಹಂತಕ್ಕೆ ತಲುಪಿತ್ತು. ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಶೆಲ್ಲಿ ಚೌಧರಿ (ನಾರಾಯಣಗಢ), ರೇಣು ಬಾಲಾ … Continued

ಇನ್ಮುಂದೆ ಎಟಿಎಂನಿಂದ ಹಣ ತೆಗೆಯುವ ವೇಗದಲ್ಲೇ ಗ್ಯಾಸ್ ಸಿಲಿಂಡರ್ ಕೂಡ ಬರುತ್ತೆ…! ದೇಶದ ಮೊದಲ ‘ಎಲ್‌ಪಿಜಿ ಎಟಿಎಂ’ ಆರಂಭ

 ಗುರುಗ್ರಾಮ: ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುವಷ್ಟೇ ಈಗ ಗ್ಯಾಸ್ ಸಿಲಿಂಡರ್ ಸಹ ಪಡೆಯುವುದು ಸುಲಭವಾಗಿದೆ ! ಯಾಕೆಂದರೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಹರಿಯಾಣದ ಗುರುಗ್ರಾಮದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಭಾರತದ ಮೊಟ್ಟಮೊದಲ ‘ಎಲ್‌ಪಿಜಿ ಎಟಿಎಂ’ ಅನ್ನು ಪ್ರಾರಂಭಿಸಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಭಾರತದ ಹಲವು ಭಾಗಗಳಲ್ಲಿ ಅಡುಗೆ ಅನಿಲ ಪೂರೈಕೆ ಕಷ್ಟಕರವಾಗಬಹುದಾದ ಸಮಯದಲ್ಲಿ ಈ … Continued

ಮದುವೆ ಮಾಡಿಸುವುದಾಗಿ ನಂಬಿಸಿ ಪಂಗನಾಮ : ದಿಬ್ಬಣದ ಸಮೇತ ತೆರಳಿದ್ದ ಗೋರಕ್ಷಕ ಬಿಟ್ಟು ಬಜರಂಗಿ ವಧು ಸಿಗದೆ ವಾಪಸ್‌…

ಹರಿಯಾಣ ಮೂಲದ ಗೋರಕ್ಷಕ ಬಿಟ್ಟು ಬಜರಂಗಿ ಅವರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ 30,000 ರೂ. ವಂಚಿಸಿರುವ ಘಟನೆ ನಡೆದಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. 2023 ರ ನೂಹ್ ಕೋಮು ಗಲಭೆಯಲ್ಲಿ ಆರೋಪಿಯಾಗಿರುವ ಬಜರಂಗಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಮತ್ತು ಆತನ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ … Continued

1 ರಿಂದ 50ರ ವರೆಗೆ ಸಂಖ್ಯೆ ಬರೆಯಲು ಬರಲಿಲ್ಲವೆಂದು 4 ವರ್ಷದ ಮಗಳನ್ನೇ ಹೊಡೆದು ಕೊಂದ ತಂದೆ..!

ಫರಿದಾಬಾದ್: ಮಗಳಿಗೆ ಮನೆಯಲ್ಲೇ ಪಾಠ ಕಲಿಸಲು ಹೋದ ತಂದೆಯೊಬ್ಬ, ಆಕೆ ಸರಿಯಾಗಿ ಅಂಕಿಗಳನ್ನು ಬರೆಯಲಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಥಳಿಸಿ ಮಗಳನ್ನೇ ಹೊಡೆದು ಸಾಯಿಸಿದ ಘಟನೆ ನಡೆದಿದೆ. ಶುಕ್ರವಾರ ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆರೋಪಿ ಕೃಷ್ಣ ಜೈಸ್ವಾಲ್ (31) ಎಂಬಾತನನ್ನು ಬಂಧಿಸಿದ್ದಾರೆ. ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ … Continued

ಲಾಟರಿಯಲ್ಲಿ 10 ಕೋಟಿ ರೂಪಾಯಿ ಗೆದ್ದ ಚಾಲಕ…!

ಸಿರ್ಸಾ (ಹರಿಯಾಣ): ಅದೃಷ್ಟ ಎಂಬುದು ಯಾವಾಗ, ಯಾರನ್ನು, ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗದು. ಹರಿಯಾಣದ ಸಿರ್ಸಾ ಜಿಲ್ಲೆಯ ರಾನಿಯಾ ಮೂಲದ ಸಾಮಾನ್ಯ ಚಾಲಕನೊಬ್ಬನಿಗೆ ಈಗ ಅಕ್ಷರಶಃ ಅದೃಷ್ಟ ಒಲಿದು ಬಂದಿದೆ. ಲಾಟರಿ ಟಿಕೆಟ್ ಖರೀದಿ ಈತ ಈಗ ಬರೋಬ್ಬರಿ 10 ಕೋಟಿ ರೂಪಾಯಿ ಶ್ರೀಮಂತನಾಗಿದ್ದಾನೆ. ಮುಹಮ್ಮದಪುರಿಯಾ ಗ್ರಾಮದ ನಿವಾಸಿ ಪೃಥ್ವಿ ಸಿಂಗ್ (35) ಎಂಬುವವರೇ … Continued