ಅರ್ಬನ್‌ ಕೋಆಪರೇಟಿವ್‌ ಬ್ಯಾಂಕುಗಳಿಗೆ ಆರ್‌ಬಿಐ ಮತ್ತೊಂದು ಅಸ್ತ್ರ

ನವದೆಹಲಿ: ಅರ್ಬನ್ ಕೋ ಆಪರೇಟಿವ್ ಬ್ಯಾಂಕು​ಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಆಗಬೇಕಾದ ಬದಲಾವಣೆಯ ಕುರಿತಂತೆ ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್ (ಆರ್​ಬಿಐ) ತಜ್ಞರ ಸಮಿತಿಯೊಂದನ್ನು ಸೋಮವಾರ ರಚಿಸಿದೆ.
ಈ ಸಮಿತಿಗೆ ರಿಸರ್ವ್ ಬ್ಯಾಂಕ್​ನ ಉಪ ಗವರ್ನರ್ ಎನ್.​ ಎಸ್.​ ವಿಶ್ವನಾಥನ್ ಅಧ್ಯಕ್ಷರಾಗಿರಲಿದ್ದು, ಇದು ಅರ್ಬನ್ ಬ್ಯಾಂಕುಗಳ ಸ್ಥಿತಿಗತಿಯಷ್ಟೇ ಅಲ್ಲದೇ ಅವುಗಳ ಮುಂದಿನ ಹಾದಿಯ ಬಗ್ಗೆಯೂ ಅಧ್ಯಯನ ನಡೆಸಲಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅರ್ಬನ್ ಬ್ಯಾಂಕುಗಳ ಕಾರ್ಯವೈಖರಿ ಬಗ್ಗೆ ಅನೇಕ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇದೇ ಆರೋಪದ ಮೇಲೆ ಆರ್​ಬಿಐ ಇತ್ತೀಚಿಗಷ್ಟೇ ದೇಶದ ಮೂರು ಅರ್ಬನ್ ಬ್ಯಾಂಕುಗಳ ಕಾರ್ಯಾಚರಣೆ ಮೇಲೆ ನಿಷೇಧ ಹೇರಿತ್ತು.
ಕಳೆದ ಐದು ವರ್ಷಗಳಲ್ಲಿ ಅರ್ಬನ್ ಬ್ಯಾಂಕುಗಳಲ್ಲಿ ಆದ ಬದಲಾವಣೆ ಗಮನವಾಗಿಟ್ಟುಕೊಂಡು ಸಮಿತಿ ಅಧ್ಯಯನ ನಡೆಸಲಿದ್ದು, ಒಂದು ವರ್ಷದೊಳಗೆ ಆಗಬೇಕಾದ ಬದಲಾವಣೆಯ ಕುರಿತು ವರದಿ ನೀಡಲಿದೆ. ಠೇವಣಿದಾರರ ಹಿತ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್​ಬಿಐ ಹೇಳಿದೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement