ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್‌ ಖಾನ್‌ ಭಾಷಣ ರದ್ದು!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾ ಸಂಸತ್ತನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ದ್ವೀಪರಾಷ್ಟ್ರ ರದ್ದುಪಡಿಸಿದೆ.
ಫೆಬ್ರವರಿ 22 ರಿಂದ ಇಮ್ರಾನ್‌ ಖಾನ್ ಎರಡು ದಿನಗಳ ಪ್ರವಾಸಕ್ಕಾಗಿ ಕೊಲಂಬೊಗೆ ಪ್ರಯಾಣಿಸಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಸಭೆ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವುದರ ಜೊತೆಗೆ, ಅವರು ಫೆಬ್ರವರಿ 24 ರಂದು ಶ್ರೀಲಂಕಾ ಸಂಸತ್ತಿನಲ್ಲಿ ಭಾಷಣ ಮಾಡಬೇಕಿತ್ತು. ಆದರೆ ಭಾಷಣವನ್ನು ಶ್ರೀಲಂಕಾ ರದ್ದುಪಡಿಸಿದೆ.
ಕೊವಿಡ್‌-19 ಕಾರಣದಿಂದ ಖಾನ್‌ ಭಾಷಣ ರದ್ದುಪಡಿಸಲಾಗಿದೆ ಎಂದು ಸ್ಪೀಕರ್‌ ಮಹಿಂದಾ ಅಬೆಯವರ್ಧನ ತಿಳಿಸಿದ್ದಾರೆ ಎಂದು ವಿದೇಶಾಂತ ಕಾರ್ಯದರ್ಶಿ ಜಯನಾಥ ಕೊಲಂಬೆಜ್‌ ತಿಳಿಸಿದ್ದಾರೆ.
ಖಾನ್‌ ತಮ್ಮ ಭಾಷಣದಲ್ಲಿ ಕಾಶ್ಮೀರ ಸಮಸ್ಯೆ ಎತ್ತಬಹುದು ಇದರಿಂದ ಭಾರತದೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗುವ ಕಾರಣದಿಂದ ಇಮ್ರಾನ್‌ ಖಾನ್‌ ಭಾಷಣ ರದ್ದುಪಡಿಸಲಾಗಿದೆ. ಅಲ್ಲದೇ ಖಾನ್‌ ಶ್ರೀಲಂಕಾದ ಮುಸಲ್ಮಾನರ ಹಕ್ಕುಗಳ ಬಗ್ಗೆ ಮಾತನಾಡಿದರೆ ಶ್ರೀಲಂಕಾ ಸರಕಾರವನ್ನು ಪೇಚಿಗೆ ಸಿಲುಕುವ ಸಾಧ್ಯತೆಯಿಂದಾಗಿ ಭಾಷಣ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೇ ಕೊರೊನಾದಿಂದ ಸಾವನ್ನಪ್ಪಿದ ಎಲ್ಲ ಧರ್ಮಿಯರನ್ನು ದಹನ ಮಾಡಬೇಕೆಂದು ಶ್ರೀಲಂಕಾ ನಿಯಮ ರೂಪಿಸಿತ್ತು. ಇದಕ್ಕೆ ಜಾಗತಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆಬ್ರವರಿ ಆರಂಭದಲ್ಲಿ ಮುಸಲ್ಮಾನರಿಗೆ ಶವಸಂಸ್ಕಾರದಿಂದ ವಿನಾಯಿತಿ ನೀಡಿತ್ತು. ಈ ಕುರಿತು ಪಾಕ್‌ ಪ್ರಧಾನಿ ಶ್ರೀಲಂಕಾ ಸರಕಾರವನ್ನು ಮುಜುಗುರಕ್ಕೀಡು ಮಾಡಬಹುದೆಂಬುದು ಕೂಡ ಭಾಷಣ ರದ್ದು ಮಾಡಲು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   2023ಕ್ಕೆ ಭಯಾನಕ ಪರಮಾಣು ದುರಂತ, ಸೌರ ಚಂಡಮಾರುತದಿಂದ ಹಾನಿ, ವಿನಾಶಕಾರಿ ಜೈವಿಕ ಶಸ್ತ್ರಾಸ್ತ್ರ ಬಳಕೆ...: ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement