ಉತ್ಸಾಹವೂ ಇಲ್ಲ, ನಾಯಕತ್ವವೂ ಇಲ್ಲ: ಕಾಂಗ್ರೆಸ್‌ ಬಗ್ಗೆ ಝಾ ಟೀಕೆ

ಕಾಂಗ್ರೆಸ್ ಮಾಜಿ ನಾಯಕ ಸಂಜಯ್ ಝಾ ಪುದುಚೇರಿ ಸರ್ಕಾರದ ಪತನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ನಾಯಕತ್ವ, ಉತ್ಸಾಹ ಯಾವುದೂ ಇಲ್ಲ ಎಂದು ಟೀಕಿಸಿದ್ದಾರೆ.
ಅತ್ಯಂತ ಸಣ್ಣ ಪ್ರದೇಶವಾದ ಪುದುಚೇರಿಯಲ್ಲಿ ಸಹ ಕಾಂಗ್ರೆಸ್ ಸರ್ಕಾರದ ಪತನವು ಅತ್ಯಂತ ಹಳೆಯ ಪಕ್ಷಕ್ಕೆ ಹೇಗೆ ಉತ್ಸಾಹವಿಲ್ಲ ಎಂಬುದನ್ನು ತೋರಿಸುತ್ತದೆ. ಅದಕ್ಕೆ ಹಸಿವೂ ಇಲ್ಲ. ನಾಯಕತ್ವವೂ ಇಲ್ಲ” ಎಂದು ಝಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಆಪರೇಷನ್ ಲೋಟಸ್ ಅನೈತಿಕ. ಆದರೆ ಕಾಂಗ್ರೆಸ್ಸಿಗರು ಅಮೆಜಾನ್‌ನಲ್ಲಿ ಸುಲಭವಾಗಿ ಸಿಗುವ ರಿಯಾಯಿತಿ ಟಾಯ್ಲೆಟ್ ಪೇಪರ್‌ನಂತೆ ಏಕೆ ಮಾರ್ಪಟ್ಟಿದ್ದಾರೆ” ಎಂದು ಅವರು ಪ್ರಶ್ನಿಸಿದ್ದಾರೆ.
ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ವಿಧಾನಸಭೆಯಲ್ಲಿ ನಡೆದ ವಿಶ್ವಾಸಾರ್ಹ ಮತದಾನಕ್ಕೆ ಮುಂಚಿತವಾಗಿ ರಾಜೀನಾಮೆ ನೀಡಿದರು, ನಾರಾಯಣಸಾಮಿ ಅವರು ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರರಾಜನ್ ಅವರನ್ನು ಭೇಟಿಯಾಗಿ ತಮ್ಮ ನಾಲ್ಕು ಸದಸ್ಯರ ಸಂಪುಟದ ರಾಜೀನಾಮೆಯನ್ನು ಏಪ್ರಿಲ್-ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಸಲ್ಲಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement