ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಕರು ಜೈಲಿಗೆ!

ದಾವಣಗೆರೆ: ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಿಕರನ್ನು ನಗರದ ಜೆಎಂಎಫ್‌ಸಿ ನ್ಯಾಯಾಲಯ ಕಾರಾಗೃಹಕ್ಕಟ್ಟಿದೆ. ರಸ್ತೆ ತೆರಿಗೆ ಕಟ್ಟದವರನ್ನು ಜೈಲಿಗೆ ಕಳಿಸಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
ಇಲ್ಲಿನ ಬೀಡಿ ಲೇಔಟ್‌ನ ಮಹಮ್ಮದ್‌ ಸಮಿವುಲ್ಲಾ ಹಾಗೂ ಟಿಪ್ಪು ನಗರದ ಮುಬಾರಕ್‌ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗಿದೆ. ತೆರಿಗೆ ಕಟ್ಟಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಆರ್‌ಟಿಒ ಅಧಿಕಾರಿ ತಿಳಿಸಿದ್ದಾರೆ.
ಸದ್ಯ 72 ಲಾರಿ ಮಾಲೀಕರ ವಿರುದ್ಧ 1 ಮತ್ತು 2 ನೇ ಜೆಎಫ್‌ಎಂಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌‌ ಹಾಕಲಾಗಿದೆ. 8 ಜನರ ವಿರುದ್ಧ ಬಂಧನದ ವಾರೆಂಟ್‌ ಹೊರಡಿಸಲಾಗಿದೆ. ಉಳಿದವರಿಗೆ ಸಮನ್ಸ್‌ ಹೋಗಿದೆ ಎಂದು ಆರ್‌ಟಿಒ ಅಧಿಕಾರಿ ಶಾನಭೋಗ ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ಇಂದಿನ ಪ್ರಮುಖ ಸುದ್ದಿ :-   ರಾಜ್ಯದ ಈ ಜಿಲ್ಲೆಗಳಲ್ಲಿ 3-4 ದಿನ ಉತ್ತಮ ಮಳೆ ಸಾಧ್ಯತೆ : ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement