- ಪುದುಚೆರಿಯ ಹಿಂದಿನ ಮುಖ್ಯಮಂತ್ರಿ ನಾರಾಯಣಸ್ವಾಮಿ ಪಕ್ಷದ ಮುಖಂಡ ಚಪ್ಪಲಿಗಳನ್ನು ಎತ್ತುವಲ್ಲಿ ಪರಿಣಿತರಾಗಿದ್ದರೇ ಹೊರತು ಪುದುಚೆರಿಯ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪರಿಣಿತರಾಗಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪುದುಚೇರಿಯಲ್ಲಿ ಮಾತನಾಡಿದ ವರು, ನಡೆಯುವ ಚುನಾವಣೆಯಲ್ಲಿ ಜನರು ಎನ್ಡಿಎ ಪರ ಮತಚಲಾಯಿಸಿದರೆ ಇಲ್ಲಿನ ಜನರನ್ನೇ ಹೈಕಮಾಂಡ್ ಎಂದು ಪರಿಗಣಿಸಲಾಗುವುದು. ರಾಜ್ಯದ ಜನರು ಕಾಂಗ್ರೆಸ್ ದುರಾಡಳಿತದಿಂದ ಮುಕ್ತರಾಗಿದ್ದಾರೆ. ಪುದುಚೇರಿಯಲ್ಲಿ ಬದಲಾವಣೆಯ ಗಾಳಿ ಗೋಚರಿಸುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತನಾಡಿದ್ದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದ ಮಾಡಿದ ಹಿಂದಿನ ಸಿಎಂ ನಾರಾಯಣಸ್ವಾಮಿ ಕ್ರಮವನ್ನು ಖಂಡಿಸಿದ ಪ್ರಧಾನಿ, ಅಸಹಾಯಕ ಮಹಿಳೆ ಚಂಡಮಾರುತದ ಸಂದರ್ಭದಲ್ಲಿ ಮುಖ್ಯಮಂತ್ರಿಯ ನಿರ್ಲಕ್ಷ್ಯದ ಬಗ್ಗೆ ಅಳಲು ತೋಡಿಕೊಂಡರೆ ನಾರಾಯಣಸ್ವಾಮಿ ಕಾಂಗ್ರೆಸ್ ಮುಖಂಡ ರಾಹುಲ್ ಎದುರು ತಮ್ಮ ಖೊಟ್ಟಿ ಸಾಧನೆ ಬಿಂಬಿಸಿಕೊಂಡರು ಎಂದರು.
ರಾಹುಲ್ ಗಾಂಧಿಯವರ ಇತ್ತೀಚಿನ ದೇಶದ ‘ಉತ್ತರ-ದಕ್ಷಿಣ’ ವಿಭಜನೆ ಕುರಿತು ಮಾತನಾಡಿ, ನಮ್ಮ ವಸಾಹತುಶಾಹಿ ಆಡಳಿತಗಾರರು ವಿಭಜನೆ ಮತ್ತು ಆಡಳಿತದ ನೀತಿಯನ್ನು ಹೊಂದಿದ್ದಾರೆ ಎಂದು ಆರೋಪ ಮಾಡಿದರು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ