ನೂತನ ವಿಜಯನಗರ ಜಿಲ್ಲೆಗೂ ೩೭೧ ಜೆ ಸೌಲಭ್ಯ:ಸರ್ಕಾರ ಆದೇಶ

ನೂತನ ವಿಜಯನಗರ ಜಿಲ್ಲೆಗೆ ಸಂವಿಧಾನದ 371 ಜೆ ವಿಧಿ ಅಡಿ ಎಲ್ಲ ಸವಲತ್ತು ಸಿಗುವಂತೆ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಇದರಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 ಜೆ ವಿಧಿ ಅಡಿ ಸಿಗುವ ಸವಲತ್ತುಗಳು ನೂತನ ವಿಜಯನಗರ ಜಿಲ್ಲೆಗೂ ಸಿಗಲಿದೆ. ವಿಧಿಯಲ್ಲಿ ಹಲವು ತಿದ್ದುಪಡಿಗಳನ್ನೂ ರಾಜ್ಯ ಸರಕಾರ ಮಾಡಿದೆ. ಪ್ಯಾರಾ 2 (ಇ)ನಲ್ಲಿ ‘ಮತ್ತು ಕೊಪ್ಪಳ ಜಿಲ್ಲೆ’ ಎಂದಿದ್ದಲ್ಲಿ, ಕೊಪ್ಪಳ ಮತ್ತು ವಿಜಯನಗರ ಎಂದು ಬದಲಾವಣೆ ಮಾಡಲಾಗಿದೆ. ಪ್ಯಾರಾ 3 (ಡಿ)ನಲ್ಲಿ ‘ಮತ್ತು ರಾಯಚೂರು ಜಿಲ್ಲೆಗಳು’ ಎಂದಿದ್ದಲ್ಲಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳು ಎಂದು ತಿದ್ದುಪಡಿ ಮಾಡಲಾಗಿದೆ. ಪ್ಯಾರಾ 17 (ಬಿ)ನಲ್ಲಿ ‘ಮತ್ತು ರಾಯಚೂರು ಜಿಲ್ಲೆ’ ಎಂದಿದ್ದಲ್ಲಿ ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳು ಎಂದು ರಾಜ್ಯ ಸರಕಾರ ತಿದ್ದುಪಡಿ ಮಾಡಿದೆ.
ಈ ಮೂಲಕ ನೂತನ ವಿಜಯನಗರ ಜಿಲ್ಲೆಗೂ 371 ಜೆ ಸವಲತ್ತು ದೊರಕುವಂತೆ ಸರಕಾರವು ಕ್ರಮ ವಹಿಸಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜತೆ ವಿಜಯನಗರ ಜಿಲ್ಲೆ ಏಳನೆಯ ಜಿಲ್ಲೆ ಆಗಿ ಸೇರ್ಪಡೆ ಆಗಿದೆ. ಶಿಕ್ಷಣ, ಔದ್ಯೋಗಿಕ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುವ ಎಲ್ಲ ಸವಲತ್ತು ವಿಜಯನಗರ ಜಿಲ್ಲೆಯ ಜನರಿಗೆ ಲಭ್ಯ ಆಗಲಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement