ನಂದಿಗ್ರಾಮ: ಬಿಜೆಪಿಗೆ ಮತ ನೀಡದಂತೆ ಟಿಕಾಯತ್‌ ಮನವಿ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿರುವ ನಂದಿಗ್ರಾಮಕ್ಕೆ ಸಂಯುಕ್ತಾ ಕಿಸಾನ್ ಮೋರ್ಚಾ(ಎಸ್‌ಕೆಎಂ) ಮುಖಂಡ ರಾಕೇಶ್ ಟಿಕಾಯತ್‌ ಶನಿವಾರ ಭೇಟಿ ನೀಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ.
ಶನಿವಾರ ಕೊಲ್ಕತ್ತಾಕ್ಕೆ ಆಗಸಿಮಿಸಿದ ಅವರನ್ನು ಟಿಎಂಸಿ ನಾಯಕ ಡೋಲಾ ಸೇನ್ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು, ಅಲ್ಲಿಂದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮಕ್ಕೆ ತೆರಳಿ ಮಹಾಪಂಚಾಯತ್ ಉದ್ದೇಶಿಸಿ ಭಾಷಣ ಮಾಡಿದರು.
“ಹೊಸ ಕೃಷಿ ಕಾನೂನುಗಳು ರೈತರ ಭವಿಷ್ಯವನ್ನು ಹಾಳುಮಾಡುತ್ತವೆ. ಎಂಎಸ್ಪಿಯಲ್ಲಿ ಬೆಳೆಗಳನ್ನು ಖರೀದಿಸಲಾಗುತ್ತಿಲ್ಲ. ಇಡೀ ದೇಶವನ್ನು ದೋಚಿದ ಬಿಜೆಪಿಗೆ ಮತ ಚಲಾಯಿಸದಂತೆ ನಾವು ಮನವಿ ಮಾಡುತ್ತೇವೆ. ಬದಲಿಗೆ ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗಳಿಗೆ ಮತ ನೀಡಿ” ಎಂದು ಮನವಿ ಮಾಡಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

ನಿಮ್ಮ ಕಾಮೆಂಟ್ ಬರೆಯಿರಿ

advertisement