ಸಿಡಿಗೂ ನನಗೆ ಸಂಬಂಧವೇ ಇಲ್ಲ, ನಾನು ಪ್ರಕರಣ ಹಿಂಪಡೆದಿದ್ದೇನೆ: ಕಲ್ಲಹಳ್ಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿ, ಸಚಿವ ಸ್ಥಾನದಿಂದ ಅವರು ಕೆಳಗಿಳಿಯಲು ಪ್ರಮುಖ ಕಾರಣರಾಗಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ತಮಗೂ ಸಿಡಿ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಈಗಾಗಲೇ ನಾನು ನೀಡಿದ್ದ ದೂರನ್ನು ಕೂಡ ವಾಪಸ್ ಪಡೆದುಕೊಂಡಿದ್ದೇನೆ. ಶುಕ್ರವಾರ ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಐವರು ವ್ಯಕ್ತಿಗಳಲ್ಲಿ ನಗಗೆ ಬಹುತೇಕರ ಪರಿಚಯವೇ ಇಲ್ಲ, ಅವರಲ್ಲಿ ಒಬ್ಬನ ಪರಿಚಯ ಮಾತ್ರ ಇದೆ ಎಂದು ಹೇಳಿದ್ದಾರೆ.
ಈವರೆಗೆ ನನಗೆ ಎಸ್ ಐಟಿಯಿಂದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಯಾವುದೇ ನೋಟೀಸ್ ಬಂದಿಲ್ಲ. ಎಸ್‌ಐಟಿ ಹಾಗೊಮ್ಮೆ ನೋಟೀಸ್ ನೀಡಿದರೆ ವಿಚಾರಣೆಗೆ ಹಾಜರಾಗಲು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement