ರಾಸಾಯನಿಕ ಲಾರಿ ಪಲ್ಟಿ: ಮೂವರ ಸಾವು

ಹಾಸನ: ರಾಸಾಯನಿಕ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಹೊತ್ತಿ ಉರಿದ ಪರಿಣಾಮ ಮೂವರು ಸಜೀವ ದಹನಗೊಂಡ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಸಮೀಪ ನಡೆದಿದೆ.
ಮೈಸೂರಿನಿಂದ ಹಾಸನಕ್ಕೆ ಕೆಮಿಕಲ್ಸ್ ಬಾಕ್ಸ್‌ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿ ಪಡುವಲಹಿಪ್ಪೆ ರಸ್ತೆಯ ತಿರುವಿನಲ್ಲಿ ಉರುಳಿದೆ. ಪರಿಣಾಮ ಕೆಮಿಕಲ್ಸ್ ಬಾಕ್ಸ್‌ಗಳು ತೆರೆಯಲ್ಪಟ್ಟು ಬೆಂಕಿ ಹೊತ್ತಿಕೊಂಡು ಲಾರಿಯಲ್ಲಿದ್ದ ಮೂವರು ಸಜೀವವಾಗಿ ದಹನಗೊಂಡಿದ್ದಾರೆ.
ಚಾಲಕ ಪುಟ್ಟರಾಜ (42) , ಪ್ರಮೋದ (19), ರಮೇಶ (40) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಚಾಲಕ ಪುಟ್ಟರಾಜು ಪ್ರಾಣ ರಕ್ಷಿಸಿಕೊಳ್ಳಲು ಲಾರಿಯಿಂದ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾಸಾಯನಿಕ ಸೋರಿಕೆಯಿಂದ ಪ್ರದೇಶದಲ್ಲಿ ದುರ್ವಾಸನೆ ಬರುತ್ತಿದೆ. ಅರಕಲಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement