ರಾಸಾಯನಿಕ ಲಾರಿ ಪಲ್ಟಿ: ಮೂವರ ಸಾವು

ಹಾಸನ: ರಾಸಾಯನಿಕ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಹೊತ್ತಿ ಉರಿದ ಪರಿಣಾಮ ಮೂವರು ಸಜೀವ ದಹನಗೊಂಡ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಸಮೀಪ ನಡೆದಿದೆ. ಮೈಸೂರಿನಿಂದ ಹಾಸನಕ್ಕೆ ಕೆಮಿಕಲ್ಸ್ ಬಾಕ್ಸ್‌ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿ ಪಡುವಲಹಿಪ್ಪೆ ರಸ್ತೆಯ ತಿರುವಿನಲ್ಲಿ ಉರುಳಿದೆ. ಪರಿಣಾಮ ಕೆಮಿಕಲ್ಸ್ ಬಾಕ್ಸ್‌ಗಳು ತೆರೆಯಲ್ಪಟ್ಟು ಬೆಂಕಿ ಹೊತ್ತಿಕೊಂಡು ಲಾರಿಯಲ್ಲಿದ್ದ ಮೂವರು ಸಜೀವವಾಗಿ ದಹನಗೊಂಡಿದ್ದಾರೆ. … Continued