ಅಂತಹ ಸರ್ಕಾರವನ್ನೇ ಉರುಳಿಸಿದ್ದೇನೆ.. ಇದ್ಯಾವ ಲೆಕ್ಕ..

ಬೆಂಗಳೂರು: ಅಂತಹ ಸರ್ಕಾರವನ್ನೇ(ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ) ಉರುಳಿಸಿದ್ದೇನೆ. ಇದ್ಯಾವ ಲೆಕ್ಕ..?. ಇನ್ನೂ ಇಂತಹ 10 ಸಿಡಿಗಳು ಬಂದರೂ ಅದನ್ನು ಎದುರಿಸಲು ಸಿದ್ಧವಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಯುವತಿ ಪೊಲೀಸರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಮ್ಮೆ ಸಿಡಿ ಯುವತಿ ತಾನು ಸಂತ್ರಸ್ತೆ ಎನ್ನುವುದೇ ಆಗಿದ್ದರೆ ಆಕೆ ಏಕೆ ಈ ಮೊದಲೇ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದರು. ಈಗ ದೂರು ನೀಡಿರುವುದರ ಹಿಂದೆ ಮಹಾ ಷಡ್ಯಂತ್ರವೇ ಅಡಗಿದೆ ಎಂದರು.
ನಾನು ಯಾವುದಕ್ಕೂ ಹೆದರುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗಿಂತ ಮುಂಚೆ ನಾನು ದೂರು ನೀಡಿದ್ದೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಸಂಬಂಧ ನಾನು ಸಹ ವಕೀಲರನ್ನು ಭೇಟಿಯಾಗುತ್ತಿದ್ದು, ಇಂತಹ ಹತ್ತು ವಿಡಿಯೋ ಬೇಕಾದರೂ ಬಿಡಲಿ. ಇದರಲ್ಲಿ ಹೆದರುವ ಪ್ರಶ್ನೆಯೇ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement