ನಕಲಿ ಸ್ವ್ಯಾಬ್ ಸಂಗ್ರಹ: ಕ್ಯಾಮೆರಾದಲ್ಲಿ ಸೆರೆಸಿಕ್ಕ ಇಬ್ಬರು ಆರೋಗ್ಯ ಸಿಬ್ಬಂದಿ ವಜಾ

ಬೆಂಗಳೂರು: ಕೊಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಇಬ್ಬರು ಆರೋಗ್ಯ ಸಿಬ್ಬಂದಿ ಹೇಮಂತ್ ಮತ್ತು ನಾಗರಾಜ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೋಮವಾರ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಮುಖ್ಯ ಆರೋಗ್ಯ ಅಧಿಕಾರಿ ತನಿಖೆ ಬಾಕಿ ಉಳಿದಿದೆ. ಕೊಡಿಗೆಹಳ್ಳಿ ಪಿಎಚ್‌ಸಿಯ ವೈದ್ಯಕೀಯ ಅಧಿಕಾರಿ ಡಾ.ಪ್ರೇಮಾನಂದ್ ಬಿ.ಆರ್ ಅವರ ದೂರಿನ ಆಧಾರದ ಮೇಲೆ ಇವರಿಬ್ಬರ ವಿರುದ್ಧ ಈಗಾಗಲೇ ಕೊಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಮಂತ್ ಮತ್ತು ನಾಗರಾಜ್ ಅವರು ಹೊಸ ಸ್ವ್ಯಾಬ್‌ಗಳನ್ನು ತೆರೆದು ಸ್ಯಾಂಪಲ್ ತೆಗೆದುಕೊಳ್ಳದೆ ಬಾಟಲುಗಳಲ್ಲಿ ಹಾಕುವ ವಿಡಿಯೋ ವೈರಲ್ ಆದ ನಂತರ ಈ ವಿಷಯ ಭಾನುವಾರ ಬೆಳಕಿಗೆ ಬಂದಿದೆ. ವಿಡೊಯೋದಲ್ಲಿ ಕಾಣಿಸಿಕೊಳ್ಳದ ಕೆಲವು ಮಹಿಳೆಯರು ಅವರೊಂದಿಗೆ ಮಾತನಾಡುವುದು ಮತ್ತು ಮಾದರಿ ಸಂಗ್ರಹದ ಬಗ್ಗೆ ತಮಾಷೆ ಮಾಡುವುದರ ಧ್ವನಿ ಕೇಳುತ್ತದೆ. ತ್ತು ಈ ವಿಡಿಯೋ ವೈರಲ್ ಆದರೆ ಅವರು ತೊಂದರೆಯಲ್ಲಿ ಸಿಲುಕುತ್ತಾರೆ ಎಂದು ಹೇಳುತ್ತಾಳೆ. ಇಬ್ಬರು ಪುರುಷರಲ್ಲಿ ಒಬ್ಬ ತಾನು ಹೆದರುವುದಿಲ್ಲ ಎಂದು ಉತ್ತರಿಸುತ್ತಾನೆ.
ಕೊವಿಡ್‌ -19 ಪರೀಕ್ಷೆಗೆ ಸ್ವ್ಯಾಬ್‌ಗಳನ್ನು ಸಂಗ್ರಹಿಸಲು ಹೇಮಂತ್ ಮತ್ತು ನಾಗರಾಜ್ ಅವರನ್ನು 10 ತಿಂಗಳ ಹಿಂದೆ ಬಿಬಿಎಂಪಿ ನೇಮಕ ಮಾಡಿಕೊಂಡಿತ್ತು. ವಿಡಿಯೊದಲ್ಲಿ ಕೇಳಿದ ಮೂವರು ಮಹಿಳಯರ ಧ್ವನಿ ಪಿಎಚ್‌ಸಿಯಲ್ಲಿ ಕೆಲಸ ಮಾಡುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಾದ (ಆಶಾ) ಕುಸುಮಾ, ಪ್ರೇಮಾ ಮತ್ತು ಪದ್ಮಾ ಎಂದು ಪೊಲೀಸರು ಗುರುತಿಸಿದ್ದಾರೆ. ಎಫ್‌ಐಆರ್ ಪ್ರಕಾರ ಪಿಎಚ್‌ಸಿಯ ಅಶೋಕ್ ಎಂಬ ಮತ್ತೊಬ್ಬ ಸಿಬ್ಬಂದಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement