ಹಂಪಿ ಲೋಕಪಾವನ ಕೊಳಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು: ಮೀನುಗಳ ಸಾವು

ಹಂಪಿ:ಹಂಪಿ ಪರಿಸರದ ಪುಣ್ಯಕೊಳವೆಂದೇ ಪ್ರಸಿದ್ಧಿ ಪಡೆದಿರುವ ಲೋಕಪಾವನ ಕೊಳಕ್ಕೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ  ಮೀನುಗಳು ಸತ್ತಿವೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ.
ಹಂಪಿಯ ಐತಿಹಾಸಿಕ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ವಿದ್ಯಾರಣ್ಯ ಮಠದ ಹಿಂಭಾಗಕ್ಕಿರುವ ಈ ಲೋಕಪಾವನ ಕೊಳವು ಮಲೀನಗೊಂಡ ಕಾರಣ ಶ್ರೀಗಳು ಅದನ್ನು ಸ್ವಚ್ಛಗೊಳಿಸಿದ್ದರು. ನಂತರ ಕೊಳದ ನೀರಿನಲ್ಲಿ ಮೀನುಗಳು ಹಾಗೂ ಆಮೆಯನ್ನು ಬಿಡಲಾಗಿತ್ತು. ಈಗ ಅವುಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಶುಕ್ರವಾರ ರಾತ್ರಿ ಯಾರೋ ಕಿಡಿಗೇಡಿಗಳು ಕೊಳದ ನೀರಿಗೆ ವಿಷ ಬೆರೆಸಿದ ಪರಿಣಾಮ ಪ್ರಮಾಣದ ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿವೆ.
ವಿದ್ಯಾರಣ್ಯ ಮಠದ ಶ್ರೀಗಳು ಸದ್ಯ ಮಠದಲ್ಲಿಲ್ಲದ ಕಾರಣ ಭಕ್ತರೇ ಮುಂದಾಗಿ ಹಂಪಿಯ  ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement