ಚೆನ್ನೈ: ಇಶಾ ಫೌಂಡೇಷನ್ನ ಸಂಸ್ಥಾಪಕ ಸದ್ಗುರು ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಕೆಲ ತಿಂಗಳುಗಳಿಂದ ‘ಫ್ರೀ ತಮಿಳುನಾಡು ಟೆಂಪಲ್ಸ್’ಎಂಬ ಸದ್ಗುರು ಅಭಿಯಾನ ಆರಂಭಿಸಿದ್ದರು. ತಮಿಳುನಾಡಿನಲ್ಲಿರುವ 44 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆಯಿಂದ ಮುಕ್ತಿಗೊಳಿಸಿ ಎಂದು ಆಗ್ರಹಿಸಿದ್ದರು. ಸದ್ಗುರು ಈ ಅಭಿಯಾನಕ್ಕೆ ಅವರಿಗೆ 3 ಕೋಟಿಗೂ ಹೆಚ್ಚು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ತಮಿಳುನಾಡು ಸರ್ಕಾರ ಯಾವುದೇ ನಿಲುವು ಪ್ರಕಟಿಸಿರಲಿಲ್ಲ. ಈಗ ಸರ್ಕಾರ ವಿರುದ್ಧ ಸದ್ಗುರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ