ಬೆಳಗಾವಿ:ಉಡಾಳ ಕಂಪನಿ ಚಲನಚಿತ್ರಕ್ಕೆ ಮುಹೂರ್ತ

ಬೆಳಗಾವಿ : ಇಂಡಾಳ ನಗರ ಶಿಂಧೋಳ್ಳಿ ಗ್ರಾಮದ ಶ್ರೀ ಗಣಪತಿ ದೇವಸ್ಥಾನದಲ್ಲಿ ನಿರಂಜನ ಸ್ವಾಮಿಗಳು ನಿರ್ಮಿಸುತ್ತಿರುವ ‘ಉಡಾಳ ಕಂಪನಿ’ ಕನ್ನಡ ಚಲನಚಿತ್ರದ ಮುಹೂರ್ತ ನಡೆಯಿತು.
ಯುವ ನಿರ್ದೇಶಕ ಸಂಜಯ್ ಎಚ್. ನಿರ್ದೇಶನಲ್ಲಿ ಚಿತ್ರ ತೆರೆಗೆ ಬರಲಿದ್ದು ಚಿತ್ರಕ್ಕೆ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಶುಭ ಕೋರಿದರು. ನಂತರ ಮಾತನಾಡಿದ ಅವರು ಚಲನಚಿತ್ರಗಳ ನಿರ್ಮಾಣ, ನಿರ್ದೇಶನ ,ತಾಂತ್ರಿಕತೆ, ಲೊಕೇಶನ್ ಗಳು ಬೆಂಗಳೂರಿಗಷ್ಟೇ ಸೀಮಿತವಾಗದೆ ಉತ್ತರ ಕರ್ನಾಟಕದವರೂ ಪಾಲ್ಗೊಳ್ಳುವದಲ್ಲದೆ , ಇಲ್ಲಿನ ಪ್ರಕೃತಿ ತಾಣಗಳು,ಐತಿಹಾಸಿಕ ಸ್ಥಳಗಳೂ ಚಲನಚಿತ್ರಗಳಲ್ಲಿ ತೋರಿಸುವಂತಾಗಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಪ್ರತಿಭಾವಂತ ಕಲಾವಿದರು, ತಂತ್ರಜ್ಞರಿದ್ದಾರೆ. ಸಕಾಲದಲ್ಲಿ ಅವಕಾಶಗಳು ಸಿಗದೆ ವಂಚಿತರಾಗುತ್ತಿದ್ದಾರೆ. ಇವತ್ತು ಅಂತಹ ಪ್ರತಿಭೆಗಳನ್ನು ಗುರುತಿಸಿ ,ಉತ್ತರ ಕರ್ನಾಟಕವೂ ಕೂಡ ಸಿನಿಮಾ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡಬೇಕಿದೆ ಎಂದರು.
ಈ ತಿಂಗಳಲ್ಲೇ ಚಿತ್ರೀಕರಣ ಆರಂಭವಾಗಲಿದ್ದು ಸಂಪೂರ್ಣ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.ಈ ಚಿತ್ರದ ಮೂಲಕ ಹೊಸ ಯುವ ಪ್ರತಿಭೆ ಸಂಜಯ್ ಎಚ್ ನಿರ್ದೇಶನ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶಾಲಾ ಜೀವನದಲ್ಲಿ ಆಗು ಹೋಗುಗಳ ಸುತ್ತಮುತ್ತ ನಡೆಯುವ ಪ್ರೇಮಕತೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಹೇಳಲಾಗದ ಕತೆ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಎದುರಿಸುವ ಸಮಸ್ಯೆಗಳ ಸುತ್ತ ಕತೆ ಸಾಗುತ್ತದೆ ಎಂದುನಿರ್ದೇಶಕರು ಹೇಳುತ್ತಾರೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಸಂದೀಪ್ ಎಸ್.ಎಂ, ನಾಯಕಿಯಾಗಿ ಪ್ರಿಯಾ ಸವದಿ, ಪ್ರಮುಖ ಪಾತ್ರದಲ್ಲಿ ಮಹಾಭಾರತ ಬಸವರಾಜ್ ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ತಂಡದಲ್ಲಿ ರಂಜಿತ್ ತಿಗಡಿ, ಮಂಜುಗೌಡರಿದ್ದು, ಸಂಗೀತವನ್ನು ರವಿಸೂರ್ಯ ನೀಡಲಿದ್ದಾರೆ. ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಗಿ ಅವರ ಪತ್ರಿಕಾ ಸಂಪರ್ಕವಿದ್ದು ಕಾರ್ಯಕಾರಿ ನಿರ್ಮಾಪಕರಾಗಿ ಅನಿಲ ಹುದಲಿ, ಕೃಷ್ಣ ನಾಯಕರ್ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ದ ನಿರ್ಮಾಪಕರು ನಿರಂಜನ ಸ್ವಾಮಿಗಳು.
ಮುಹೂರ್ತ ಸಮಾರಂಭದಲ್ಲಿ ಗ್ರಾಮದ ಗುರುಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಮಹಾಂತೇಶಣ್ಣ ಮತ್ತಿಕೊಪ್ಪ, ಕೃಷ್ಣ ನಾಯ್ಕರ್, ಮಂಜು, ಅನಿಲ ಹುದಲಿ, ರವಿ, ರಂಜಿತ ತಿಗಡಿ, ಮಹಾಂತೇಶ ರಣಗಟ್ಟಿಮಠ, ಮಹೇಶ ಶಾಸ್ತ್ರಿಗಳು, ಪ್ರವೀಣ ಕಣಗಲೆ, ಉಮೇಶ ಬಡಿಗೇರ, ಬಸವರಾಜ ಹಮ್ಮಿಣಿ, ಈರಣ್ಣ ಉಮ್ರಾಣಿ, ಬಸಪ್ಪ ಹುದಲಿ ಸೇರಿದಂತೆ ಅನೇಕ ಕಲಾವಿದರು ಇದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement