ಹೊನ್ನಾವರ: ತಾಯಿ ಬಟ್ಟೆ ಒಗೆಯುವಾಗ ಆಡುತ್ತಿದ್ದ ಒಂದೂವರೆ ವರ್ಷದ ಮಗು ನದಿಯಲ್ಲಿ ಬಿದ್ದು ನಾಪತ್ತೆ…!

ಹೊನ್ನಾವರ : ಹೊನ್ನಾವರ ತಾಲೂಕಿನ ಹುಡಗೋಡ ಬಳಿ ಒಂದೂವರೆ ವರ್ಷದ ಮಗು ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ನೀರುಪಾಲಾದ ಮನ ಕಲಕುವ ಘಟನೆ ನಡೆದಿದೆ.
ತಾಯಿಯ ಜೊತೆಗೆ ಬಟ್ಟೆ ತೊಳೆಯಲು ನದೀ ತೀರಕ್ಕೆ ಬಂದಿದ್ದ ಪುಟ್ಟ ಮಗು ಕಾರ್ತಿಕ ರಮೇಶ ನಾಯ್ಕ ಎಂಬಾತನೇ ಗುಂಡಬಾಳಾ ನದಿ ಪಾಲಾದ ದುರ್ದೈವಿಯಾಗಿದ್ದಾನೆ.
ಭಾನುವಾರ ಮಧ್ಯಾಹ್ನ ತಾಯಿ ಶ್ರುತಿ ರಮೇಶ ನಾಯ್ಕ ಬಟ್ಟೆ ತೊಳೆಯಲು ಮನೆಯ ಸಮೀಪದ ಗುಂಡಬಾಳಾ ನದಿಯ ಬಳಿ ತೆರಳಿದಾಗ ಈತನೂ ತಾಯಿಯ ಜೊತೆಯೇ ಹೋಗಿದ್ದ ಎನ್ನಲಾಗಿದೆ.
ತಾಯಿಬಟ್ಟೆ ತೊಳೆಯುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಮಗು ಆಕಸ್ಮಿಕವಾಗಿ ನೀರಲ್ಲಿ ಬಿದ್ದಿದೆ ಎನ್ನಲಾಗಿದೆ. ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಮಗುವಿನ ಕುಟುಂಬಸ್ಥರು ಹಾಗೂ ಸುತ್ತಮುತ್ತಲ ಜನರು ನದಿಯ ಸಮೀಪಕ್ಕೆ ಧಾವಿಸಿ ಬಂದಿದ್ದಾರೆ. ಸಾರ್ವಜನಿಕರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಮಗು ಇನ್ನೂ ಪತ್ತೆಯಾಗಿಲ್ಲ. ಹೊನ್ನಾವರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಗುವಿನ ಹುಡುಕಾಟದಲ್ಲಿ ತೊಡಗಿದ್ದಾರೆ. ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಪ್ರಮುಖ ಸುದ್ದಿ :-   ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ : ಆದ್ರೆ ನಾಲ್ಕು ಪಕ್ಷಿಗಳಿಗೆ 444 ರೂ. ಟಿಕೆಟ್...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement