ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. 40 ಪ್ರಯಾಣಿಕರು ಹೊತ್ತೊಯ್ಯುತ್ತಿದ್ದ ಬಸ್ ಸಂಚಾರ ನಡೆಸುವಾಗ ಈ ಅವಘಡ ನಡೆದಿದ್ದು, ಪ್ರಾಯಾಣಿಕರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.
ಜನರ ರಕ್ಷಣಾ ಕಾರ್ಯಾಚರಣೆಗೆ ಪೊಲೀಸರೊಂದಿಗೆ ಸ್ಥಳೀಯ ಆಡಳಿತ ಕೂಡ ಮುಂದಾಗಿದ್ದು, ಎನ್ಡಿ ಆರ್ಎಫ್ ಗೆ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಅವಘಡದಲ್ಲಿ ಬಸ್ ಸೇರಿದಂತೆ ಕಾರೊಂದು ಸಿಲುಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾತಿ ನಿರೀಕ್ಷೆಯಲ್ಲಿದ್ದೇವೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ತಿಳಿಸಿದ್ದಾರೆ.
ಕಿನ್ನೌರ್ನ ರೆಕಾಂಗ್ ಪಿಯೋ ಶಿಮ್ಲಾ ಹೆದ್ದಾರಿಯಲ್ಲಿ ಇಂದು(ಬುಧವಾರ) ಮಧ್ಯಾಹ್ನ 12. 45ರ ಸುಮಾರಿಗೆ ಈ ಭೂ ಕುಸಿತ ಸಂಭವಿಸಿದೆ. ಕಿನ್ನೌರ್ ನಿಂದ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದ ಹಿಮಾಚಲ ಪ್ರದೇಶದ ರಾಜ್ಯ ಸಾರಿಗೆ ಬಸ್ ಜೊತೆ ಇತರೆ ವಾಹನಗಳು ಕೂಡ ಅವಶೇಷಗಳ ಅಡಿ ಸಿಲುಕಿವೆ.ರಕ್ಷಣಾ ಕಾರ್ಯಚಾರಣೆ ತಂಡ ಬಸ್ ಚಾಲಕ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಿದ್ದು,, ಇತರರ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಕಡಿದಾದ ಗುಡ್ಡದ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದು ಕಲ್ಲುಗಳು ಬೀಳುತ್ತಿರುವುದು ರಕ್ಷಣಾ ಕಾರ್ಯಾಚಾರಣೆಗೆ ಅಡ್ಡಿಯಾಗಿದೆ.ಈ ರಕ್ಷಣಾ ಕಾರ್ಯಚಾರಣೆಗೆ ಇಂಡೋ ಟಿಬೆಟಿಯನ್ ಗಡಿ ಪೊಲೀಸರನ್ನು (ಐಟಿಬಿಪಿ) ಕೂಡ ಕಳುಹಿಸಲಾಗಿದೆ.
ರಾಜ್ಯದ ಹಲವು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತವಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆಗೆ ಸಿಮೌರ್ ಜಿಲ್ಲೆಯ 100 ಮೀ ರಸ್ತೆ ಸಂಪೂರ್ಣವಾಗಿ ಕುಸಿಯುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.
ನಿಮ್ಮ ಕಾಮೆಂಟ್ ಬರೆಯಿರಿ