ಬಿಜೆಪಿ ಸಭೆ ವಿರೋಧಿಸಿ ಕರ್ನಲ್ ಕಡೆಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್: 10 ಮಂದಿಗೆ ಗಾಯ; ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ ರೈತರು

ಚಂಡೀಗಡ: ಶನಿವಾರ ಕರ್ನಲ್‌ನ ಘರೌಂಡಾ ಟೋಲ್ ಪ್ಲಾಜಾದಲ್ಲಿ ಹರಿಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಇದರ ನಂತರ, ರೈತರ ಸಂಘಟನೆ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (SKM) ಹರಿಯಾಣದಾದ್ಯಂತ ಎಲ್ಲ ಹೆದ್ದಾರಿಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸುವಂತೆ ರೈತರಿಗೆ ಕರೆ ನೀಡಿತು.
ಘಟನೆಯ ಕುರಿತು, ಎಸ್‌ಕೆಎಂನ ದರ್ಶನ್ ಪಾಲ್, “ಶಾಂತಿಯುತ ಪ್ರತಿಭಟನೆಯ ಹೊರತಾಗಿಯೂ, ರೈತರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು ಮತ್ತು ಲಾಠಿ ಚಾರ್ಜ್ ಮಾಡಲಾಯಿತು. ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಹೇಳಿದರು. ಫೇಸ್‌ಬುಕ್‌ನಲ್ಲಿನ ವಿಡಿಯೊದಲ್ಲಿ, ಅವರು ತಮ್ಮ ಬಿಡುಗಡೆಗೆ ಒತ್ತಾಯಿಸಿದರು.
, “ಬಂಧನಕ್ಕೊಳಗಾದ ಎಲ್ಲರನ್ನು ಹರಿಯಾಣ ಪೊಲೀಸರು ಬಿಡುಗಡೆ ಮಾಡುವವರೆಗೂ ರಸ್ತೆಗಳನ್ನು ನಿರ್ಬಂಧಿಸುವುದನ್ನು ಮುಂದುವರಿಸಿ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಹರಿಯಾಣ ಮುಖ್ಯಸ್ಥ ಗುರ್ನಾಮ್ ಸಿಂಗ್ ಚಧುನಿ ರೈತರಿಗೆ ಮನವಿ ಮಾಡಿದರು

ಹಿಂದಿನ ದಿನ, ಸಂಯುಕ್ತ ಕಿಸಾನ್ ಮೋರ್ಚಾ (SKM) ಶನಿವಾರ ಸಂಜೆ 5 ಗಂಟೆ ವರೆಗೆ ಹರಿಯಾಣದ ಹೆದ್ದಾರಿಗಳನ್ನು ನಿರ್ಬಂಧಿಸುವಂತೆ ಪ್ರತಿಭಟನಾಕಾರರಿಗೆ ಸೂಚನೆ ನೀಡಿತ್ತು.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ ತಮ್ಮ ಸ್ವಂತ ಕ್ಷೇತ್ರವಾದ ಕರ್ನಲ್‌ನಲ್ಲಿ ಬಿಜೆಪಿ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಮನೋಹರ್ ಲಾಲ್ ಖಟ್ಟರ್ ಅಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಸಭೆಯಲ್ಲಿ ಹಾಜರಿದ್ದರು.
ಕರ್ನಲ್‌ ಬಳಿಯ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ರೈತರು ಲಾಠಿ ಚಾರ್ಜ್ ಮಾಡುವಾಗ ಸಭೆಗೆ ಮುಖ್ಯಮಂತ್ರಿಗಳ ಭೇಟಿಯನ್ನು ವಿರೋಧಿಸಿ ಜಮಾಯಿಸಿದ್ದರು. ಘಟನೆಯ ನಂತರ ಕನಿಷ್ಠ ಹತ್ತು ರೈತರು ಗಾಯಗೊಂಡರು.
ಸಂಯುಕ್ತ ಕಿಸಾನ್ ಮೋರ್ಚಾ (SKM) ದರ್ಶನ್ ಪಾಲ್, “ಈಗ ಯಾವುದೇ ಪ್ರತಿಭಟಿಸುವ ರೈತರಿಗೆ ಏನಾದರೂ ಸಂಭವಿಸಿದಲ್ಲಿ, ಆಂದೋಲನವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಹರಿಯಾಣದ ಜೆಜೆಪಿ ಸರ್ಕಾರದ ಸಾರ್ವಜನಿಕ ಕಾರ್ಯಗಳನ್ನು ವಿರೋಧಿಸುತ್ತಿದ್ದಾರೆ.
ಲಾಠಿ ಚಾರ್ಜ್ ವಿರೋಧಿಸಿ ಟೋಲ್ ಪ್ಲಾಜಾಗಳು ಸೇರಿದಂತೆ ಹಲವು ರಸ್ತೆಗಳು ಮತ್ತು ಹೆದ್ದಾರಿಗಳನ್ನು ವಿವಿಧೆಡೆ ನಿರ್ಬಂಧಿಸಲಾಗಿದೆ.
ಪೀಡಿತ ಮಾರ್ಗಗಳಲ್ಲಿ ಫತೇಹಾಬಾದ್-ಚಂಡೀಗಡ, ಗೋಹಾನಾ-ಪಾಣಿಪತ್, ಜಿಂದ್-ಪಟಿಯಾಲಾ ಹೆದ್ದಾರಿಗಳು, ಅಂಬಾಲ-ಕುರುಕ್ಷೇತ್ರ, ಕರ್ನಲ್ ಬಳಿ ದೆಹಲಿ ಹೆದ್ದಾರಿ, ಹಿಸಾರ್-ಚಂಡೀಗಡ ಮತ್ತು ಕಲ್ಕಾ-ಜೀರಾಕ್‌ಪುರ ರಾಷ್ಟ್ರೀಯ ಹೆದ್ದಾರಿಗಳು ಸೇರಿವೆ. ಹಲವಾರು ಪ್ರಯಾಣಿಕರು ದೀರ್ಘಕಾಲದವರೆಗೆ ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದರು.
ಹಿಂದಿನ ದಿನ, ಪಂಚಕುಲದ ಕಮೀಷನರೇಟ್ ಟ್ವೀಟ್ ಮಾಡಿ, ಸೂರಜ್‌ಪುರ್ ಟೋಲ್ ಪ್ಲಾಜಾವನ್ನು ಪ್ರತಿಭಟನಾಕಾರರು ನಿರ್ಬಂಧಿಸಿದ್ದಾರೆ ಮತ್ತು ಇತರ ಮಾರ್ಗಗಳಿಗೆ ಸಂಚಾರವನ್ನು ತಿರುಗಿಸಲಾಗುತ್ತಿದೆ ಎಂದು ಜನರಿಗೆ ಮಾಹಿತಿ ನೀಡಿದ್ದರು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಎಸ್‌ಡಿಎಂ ವಜಾಗೊಳಸಲು ಎಸ್‌ಕೆಎಂ ಒತ್ತಾಯ
ಸಂಯುಕ್ತ ಕಿಸಾನ್ ಮೋರ್ಚಾ ಘಟನೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಕರ್ನಾಲ್‌ನಲ್ಲಿ ಶನಿವಾರ “ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ಮಾಡಲು” ಪೊಲೀಸರಿಗೆ ಆದೇಶಿಸಿದ ಉಪವಿಭಾಗದ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಸಂಘಟನೆ ಒತ್ತಾಯಿಸಿದೆ. ಹೇಳಿಕೆಯ ಪ್ರಕಾರ, ಈ ಆದೇಶವನ್ನು ವೈರಲ್ ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ.
ಹೆಚ್ಚುವರಿಯಾಗಿ, ಎಸ್‌ಕೆಎಂ ತನ್ನ ಹೇಳಿಕೆಯಲ್ಲಿ, ಪ್ರಧಾನಿ ಮೋದಿ ಜಲಿಯನ್ ವಾಲಾಬಾಗ್ ವರ್ಚುವಲ್ ಸಮಾವೇಶ ಮಾಡುತ್ತಿರುವಾಗ, ಕರ್ನಲ್‌ನಲ್ಲಿ ಜಲಿಯನ್ ವಾಲಾ ಬಾಗ್ ತರಹ ವರ್ತಿಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ರೈತರು ಹಿಮ್ಮೆಟ್ಟುವುದಿಲ್ಲ ಎಂದು ಎಸ್‌ಕೆಎಂ ಖಟ್ಟರ್-ಚೌತಾಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

  ಪೋಲಿಸ್ ಲಾಠಿ ಚಾರ್ಜ್; ಕಾಂಗ್ರೆಸ್, ಇತರ ಪಕ್ಷಗಳ ಖಂಡನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. “ಮತ್ತೊಮ್ಮೆ, ರೈತರ ರಕ್ತವನ್ನು ಚೆಲ್ಲಲಾಯಿತು, ಇದು ಭಾರತಕ್ಕೆ ಅವಮಾನ ತಂದಿದೆ ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ,
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರವು ರೈತರನ್ನು ಜನರಲ್ ಡೈಯರ್ ರೀತಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ನವೆಂಬರ್ 25, 2020 ರಿಂದ ಇಂದಿನವರೆಗೆ, ರಾಕ್ಷಸನಂತಹ ಮೋದಿ ಮತ್ತು ಖಟ್ಟರ್ ಸರ್ಕಾರಗಳು ನಿರಂತರವಾಗಿ ದಾಳಿ ಮಾಡಿ ರೈತ-ಕಾರ್ಮಿಕರ ರಕ್ತವನ್ನು ಚೆಲ್ಲುತ್ತಿವೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement