ಜಮೀನು ಜಗಳ : ಜಮಖಂಡಿಯಲ್ಲಿ ನಾಲ್ವರ ಸಹೋದರರ ಭೀಕರ ಹತ್ಯೆ

ಬಾಗಲಕೋಟೆ : ಮಾರಕಾಸ್ತ್ರಗಳಿಂದ ಕೊಚ್ಚಿ ನಾಲ್ವರು ಸಹೋದರರನ್ನು ಬರ್ಬರವಾಗಿ ಕೊಲೆ ಮಾಡಿದ  ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹಣಮಂತ  (45), ಬಸವರಾಜ   (37), ಈಶ್ವರ   (35) ಮತ್ತು ಮಲ್ಲಪ್ಪ  (33) ಕೊಲೆಯಾದ ಸಹೋದರರು ಎಂದು ಗುರುತಿಸಲಾಗಿದೆ.
ತೋಟದ ಮನೆಯೊಂದರಲ್ಲಿ ನಾಲ್ವರು ಸಹೋದರರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಘಟನೆ ನಡೆದ ಸ್ಥಳಕ್ಕೆ ಜಮಖಂಡಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಣ್ಣೆರಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದೆ.   ಹೊರಗಿನವರನ್ನು ಕರೆಸಿ ಕೊಲೆ ಮಾಡಿಸಿರುವದಾಗಿ ಮೇಲ್ನೋಟಕ್ಕೆ ಕಂಡು‌ಬಂದಿದೆ,  ಪೊಲೀಸರು  ತನಿಖೆ ಮಾಡುತ್ತಿದ್ದಾರೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement