ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರ ದುರ್ಮರಣ; ಓರ್ವನ ರಕ್ಷಿಸಲು ಹೋಗಿ ಮತ್ತೆ ಮೂವರು ಸಾವು

ಬಾಗಲಕೋಟೆ: ನಾರಾಯಣಪುರ ಅಣೆಕಟ್ಟು ಹಿನ್ನೀರಿನಲ್ಲಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಬಳಿ ಓರ್ವ ವ್ಯಕ್ತಿಯನ್ನು ರಕ್ಷಿಸಲು ಹೋಗಿ ನಾಲ್ವರು ಮೃತಪಟ್ಟಿದ್ದಾರೆ. ಶಿವಪ್ಪ ಅಮಲೂರು, ಯಮನಪ್ಪ ಅಮಲೂರು(45), ಶರಣಗೌಡ ಬಿರಾದರ್(30) ಮತ್ತು ಪರಶು ಎಂಬುವವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿಯಲ್ಲಿ ಮುಳುಗಿದ್ದಾರೆ. ಈ ವೇಳೆ ಶಿವಪ್ಪನ ಮೃತದೇಹ ಹುಡುಕಲು ಶಿವಪ್ಪ ಅಮಲೂರು ಪುತ್ರ ಯಮನಪ್ಪ ಅಮಲೂರು ಮತ್ತು ಶಿವಪ್ಪ ಅಮಲೂರು ಅಳಿಯ ಶರಣಗೌಡ ಬಿರಾದರ್ ಸೇರಿ 11 ಜನ ಬೋಟ್​ನಲ್ಲಿ ತೆರಳಿದ್ದಾರೆ. ಆಗ ವಿದ್ಯುತ್ ಸ್ಪರ್ಶಿಸಿ ಶಿವಪ್ಪನ ಪುತ್ರ, ಅಳಿಯ ಮತ್ತು ಇವರನ್ನು ಕರೆದೊಯ್ದಿದ್ದ ಬೋಟ್ ಆಪರೇಟರ್ ಪರಶು ಸೇರಿ ಮೂವರು ಮೃತಪಟ್ಟಿದ್ದಾರೆ. ಅದೃಷ್ಟವಷಾತ್​ ಬೋಟ್​ನಲ್ಲಿದ್ದ ಇತರೆ 8 ಜನ ಪಾರಾಗಿದ್ದಾರೆ. ಮೃತರು ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಮೂಲದವರು ಎಂದು ತಿಳಿದು ಬಂದಿದೆ.
ಶಿವಪ್ಪ ಅಮಲೂರರ ಶವ ಹುಡುಕೋದಕ್ಕೆ ಬೋಟ್ ಮೂಲಕ ಹೋದ ಮಗ, ಅಳಿಯ, ಬೋಟ್ ಆಪರೇಟರ್ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಹುನಗುಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement