ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರ ಕಾರನ್ನು ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಓಡಿಸಿದ ಆರೋಪದ ಮೇಲೆ ಕೇಂದ್ರ ಸಚಿವರನ್ನು ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಸೋಮವಾರ) ದೇಶಾದ್ಯಂತ ರೈಲು ತಡೆ ಪ್ರತಿಭಟನೆ ನಡೆಸಿದೆ.
ರೈತರ ಹಲವಾರು ಗುಂಪುಗಳು ಈಗಾಗಲೇ ಪಂಜಾಬ್ನ ಕೆಲವು ಭಾಗಗಳಲ್ಲಿ ರೈಲು ಹಳಿಗಳನ್ನು ನಿರ್ಬಂಧಿಸಲು ಆರಂಭಿಸಿದ್ದು, ಉತ್ತರ ಪ್ರದೇಶದಲ್ಲಿ ಪೊಲೀಸರು ಲಕ್ನೋದಲ್ಲಿ ರೈತರು ರೈಲು ತಡೆ ನಡೆಸದಂತೆ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ತಮ್ಮ ಸುದೀರ್ಘ ಆಂದೋಲನವನ್ನು ಮುಂದುವರಿಸಿರುವ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಲಖಿಂಪುರ್ ಖೇರಿ ಪ್ರಕರಣದಲ್ಲಿ “ನ್ಯಾಯ ಸಿಗುವ ವರೆಗೂ ಪ್ರತಿಭಟನೆಗಳನ್ನು ತೀವ್ರಗೊಳಿಸಲಾಗುವುದು” ಎಂದು ಹೇಳಿದೆ.
ರೈತರಿಂದ ರೈಲು ತಡೆ ಪ್ರತಿಭಟನೆ ಇಂದು ಸಂಜೆ 4 ಗಂಟೆ ವರೆಗೆ ದೇಶಾದ್ಯಂತ ನಡೆಯಿತು.
160 ರೈಲುಗಳಿಗೆ ಬಾಧಿಸಿದ ರೈಲು ತಡೆ, 43 ರೈಲುಗಳು ರದ್ದು.
ರೈತರ ರೈಲು ತಡೆ ಅಭಿಯಾನದಿಂದಾಗಿ ಸುಮಾರು 160 ರೈಲುಗಳ ಮೇಲೆ ಪರಿಣಾಮ ಬೀರಿದೆ. ಏಳು ರೈಲ್ವೆ ವಲಯಗಳು ಪ್ರತಿಭಟನೆಗೆ ಸಾಕ್ಷಿಯಾಗಿವೆ. 184 ಸ್ಥಳಗಳಲ್ಲಿ, ರೈತರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. 63 ರೈಲುಗಳನ್ನು ನಿಲ್ಲಿಸಲಾಗಿದೆ. 43 ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ 50 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಪಂಜಾಬ್-ಹರಿಯಾಣದಲ್ಲಿ ಹಲವಾರು ರೈಲು ಮಾರ್ಗಗಳು ರೈಲು ತಡೆ ಪರಿಣಾಮ ಎದುರಿಸಬೇಕಾಯಿತು.
ಉತ್ತರ ರೈಲ್ವೇ ವಕ್ತಾರರು ಭಿವಾನಿ-ರೇವಾರಿ, ಸಿರ್ಸಾ-ರೇವಾರಿ, ಲೋಹರು-ಹಿಸಾರ್, ಸುರತ್ಗಡ-ಬಟಿಂಡಾ, ಸಿರ್ಸಾ-ಬಟಿಂಡಾ, ಹನುಮಾನ್ಗರ್-ಬಟಿಂಡಾ, ರೋಹ್ಟಕ್-ಭಿವಾನಿ, ರೇವಾರಿ-ಸದುಲ್ಪುರ್, ಹಿಸಾಮರ್-ಬತಿಂಡಾ, ಹನುಮಂಗರ್-ಸದ್ಪುರ್ ಮತ್ತು ಶ್ರೀನಗರಗಳಲ್ಲಿ ರೈಲು ಸಂಚಾರಗಳ ರೈಲ್ ತಡೆ ಆಂದೋಲನ ಪರಿಣಾಮ ಬೀರಿತು.
ಸಂಯುಕ್ತ ಕಿಸಾನ್ ಮೋರ್ಚಾದ ನಾಯುಕ ರಾಕೇಶ್ ಟಿಕಾಯತ್ ಲಖಿಂಪುರ ಖೇನಿ ಘಟನೆಯಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿರುವುದರಿಂದ ಕೇಂದ್ರ ಸಚಿವ ಅಜಯ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತ ಕಿಸಾನ್ ಯೂನಿಯನ್ ನ ರಾಕೇಶ್ ಟಿಕಾಯತ್ ಅವರು, ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮೃತಪಟ್ಟ ಘಟನೆಯ ಬಗ್ಗೆ ಕೇಂದ್ರ ಸಚಿವ ಅಜಯ ಮಿಶ್ರಾ ಅವರನ್ನೂ ತನಿಖೆ ಮಾಡಬೇಕು. ಹೀಗಾಗಿ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ