ಮುಂಬೈ: ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಅವರಿಗೆ ಸಮೀರ್ ವಾಂಖೇಡೆ ಪತ್ನಿ ಕ್ರಾಂತಿ ರೇಡ್ಕರ್ ತಮ್ಮ ಮದುವೆ ಫೋಟೋ ಬಿಡುಗಡೆ ಮಾಡುವ ಮೂಲಕ ಬಾಯ್ಮುಚ್ಚಿಸಿದ್ದಾರೆ.
ಸದ್ಯ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ನ ಅವರ ಮುಂಬೈ ಕ್ರೂಸ್ ಡ್ರಗ್ಸ್ ಹಗರಣದಲ್ಲಿ ಮುಂಬೈ ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧ ಸ್ವತಂತ್ರ ಸಾಕ್ಷಿಯೊಬ್ಬರು ಲಂಚದ ಆರೋಪ ಮಾಡಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಾಂಖೇಡೆ ಹಾಗೂ ಅವರ ಕುಟುಂಬಸ್ಥರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದು, ನಕಲಿ ಪ್ರಮಾಣಪತ್ರಗಳ ಆಧಾರದ ಮೇಲೆ ವಾಂಖೇಡೆ ಸರ್ಕಾರಿ ಉದ್ಯೋಗ ಪಡೆದಿದ್ದಾರೆ, ವಾಂಖೆಡೆ ಅವರ ತಂದೆ ಮುಸ್ಲಿಂ ಆಗಿದ್ದು, ವಾಂಖೇಡೆ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದರು.
ಈಗ ಸಮೀರ್ ವಾಂಖೇಡೆ ಪತ್ನಿ, ಬಹುಭಾಷಾ ನಟಿ ಕ್ರಾಂತಿ ರೇಡ್ಕರ್ ತಮ್ಮ ಮದುವೆ ಫೋಟೋ ಶೇರ್ ಮಾಡಿದ್ದು, ಮದುವೆಯ ಕುರಿತು ಆಗುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.ನಾನು ಹಿಂದೂ. ನನ್ನ ಗಂಡನೂ ಹಿಂದೂ. ಇಬ್ಬರೂ ಜನಿಸಿದ್ದು ಹಿಂದೂವಾಗಿಯೇ. ನಾನು ಯಾವತ್ತೂ ಮತಾಂತರಗೊಂಡವಳಲ್ಲ, ಮೊದಲು ಎಲ್ಲಾ ಧರ್ಮಗಳನ್ನು ಗೌರವಿಸುವುದನ್ನು ನೀವು ಕಲಿಯಿರಿ ಎಂದು ಹೇಳಿದ್ದಾರೆ. ಎಂದು ಅವರು ಹೇಳಿದ್ದಾರೆ, ಅವರು ಮಲಿಕ್ ಹೇಳಿಕೊಂಡಂತೆ ‘ಪ್ರಯೋಜನಗಳನ್ನು’ ಸಂಗ್ರಹಿಸುವ ಸಲುವಾಗಿ ಮುಸ್ಲಿಂ ಎಂದು ತನ್ನ ಗುರುತನ್ನು ಎಂದಿಗೂ ತಪ್ಪಾಗಿ ಪ್ರತಿನಿಧಿಸಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಾಂತಿ ರೆಡ್ಕರ್ ವಾಂಖೆಡೆ ಟ್ವೀಟ್ ಮಾಡಿದ್ದಾರೆ: “ನಾನು ನನ್ನ ಪತಿ ಸಮೀರ್ ಆರ್ ಜನ್ಮತಃ ಹಿಂದೂಗಳು. ನಾವು ಎಂದಿಗೂ ಬೇರೆ ಧರ್ಮಕ್ಕೆ ಮತಾಂತರಗೊಂಡಿಲ್ಲ. ಆದರೆ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಸಮೀರ್ ತಂದೆ ಹಿಂದೆ ನನ್ನ ಮುಸ್ಲಿಂ ಅತ್ತೆಯನ್ನು ಮದುವೆಯಾಗಿದ್ದಾರೆ, ನನ್ನ ಅತ್ತೆ ಈಗಿಲ್ಲ. ಶಬಾನಾ ಖುರೇಷಿಯೊಂದಿಗಿನ ತನ್ನ ಪತಿ ಸಮೀರ ವಾಂಖೇಡೆ ಅವರ ಮೊದಲ ಮದುವೆಯು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ನಡೆದಿದೆ 2016 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ನಮ್ಮ ವಿವಾಹ ಹಿಂದೂ ವಿವಾಹ ಕಾಯ್ದೆ 2017ರ ಅಡಿ ಮದುವೆಯಾಗಿದೆ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇದೇ ವೇಳೆ ನವಾಬ್ ಮಲಿಕ್ ಆರೋಪಕ್ಕೆ ತಿರುಗೇಟು ನೀಡಿರುವ ಕ್ರಾಂತಿ, ನೀವು ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಈಜುವಾಗ, ನೀವು ಮುಳುಗಬಹುದು, ಆದರೆ ದೇವರು ನಿಮ್ಮೊಂದಿಗಿದ್ದರೆ, ನಿಮಗೆ ಯಾರಿಂದಲೂ ಹಾನಿ ಮಾಡಲೂ ಸಾಧ್ಯವಿಲ್ಲ. ಯಾಕೆಂದರೆ ನಿಜ ಏನಂದು ದೇವರಿಗಷ್ಟೇ ತಿಳಿದಿರುತ್ತದೆ. ಶುಭೋದಯ. ಸತ್ಯಮೇವ ಜಯತೆ.’ ಎಂದು ಬರೆದುಕೊಂಡಿದ್ದಾರೆ.
ಶತ್ರು ಕೂಡ ನನ್ನ ಗಂಡನ ತಪ್ಪೆಂದು ಹೇಳುವುದಿಲ್ಲ. ಸಮೀರ್ 15 ವರ್ಷಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಈ ಗೌರವವನ್ನು ಹೊಂದಿದ್ದಾರೆ. ಅವರು ಕ್ಲೀನ್ ಇಮೇಜ್ ಹೊಂದಿರುವ ಅಧಿಕಾರಿ. ಈ ಡ್ರಗ್ ಪ್ರಕರಣದಿಂದ ಅವರನ್ನು ತೆಗೆದುಹಾಕಲು ಅನೇಕರು ಬಯಸುತ್ತಾರೆ. ಆದ್ದರಿಂದ ಕುಟುಂಬವನ್ನೂ ಮಧ್ಯೆ ಎಳೆದುತಂದು ನಾಚಿಗೆಗೇಡಿನ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ