ಮಂಗಳೂರು: ಕೋಳಿ ಹಿಡಿಯಲು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ರಾಮಯ್ಯ ಎಂಬುವರಿಗೆ ಸೇರಿದ ಬಾವಿಗೆ ಚಿರತೆ ಬಿದ್ದಿದೆ. ಆಹಾರ ಹುಡುಕುಕೊಂಡು ಬಂದಿದ್ದ ಚಿರತೆ ಕೋಳಿ ಹಿಡಿಯಲು ಹೊಂಚು ಹಾಕಿತ್ತು. ಕೊಳಿ ಹಿಡಿಯಲು ಹಾರಿದ ಚಿರತೆಗೆ ಕೋಳಿ ಸಿಗಲಿಲ್ಲ, ಬದಲಾಗಿ ಆಳವಾದ ಬಾವಿಯಲ್ಲಿ ಬಿತ್ತು. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯ ರಕ್ಷಣಾ ಕಾರ್ಯಕ್ಕೆ ನಡೆದಿದೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ