ಮಂಡ್ಯ: ಸಂಗಮದಲ್ಲಿ ಪುನೀತ್‌ ರಾಜಕುಮಾರ 11ನೇ ದಿನದ ಕಾರ್ಯ ಮಾಡಿದ ವಿನೋದ್ ರಾಜ್

ಮಂಡ್ಯ: ನಟ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ನಿಧನರಾಗಿ ಇಂದಿಗೆ (ಸೋಮವಾರಕ್ಕೆ) 11ನೇ ದಿನ. ಕುಟುಂಬಸ್ಥರು ಅವರ ಸಮಾಧಿ ಸ್ಥಳದಲ್ಲಿ 11ನೇ ದಿನದ ಕಾರ್ಯಕ್ರಮ ನೆರವೇರಿಸಿದರೆ ಶ್ರೀರಂಗ ಪಟ್ಟಣದ ಗಂಜಾಂ ಬಳಿಯ ಸಂಗಮ ಕ್ಷೇತ್ರದಲ್ಲಿ ನಟ ವಿನೋದ್ ರಾಜ್ ಅವರು ಅಪರ ಕರ್ಮ ಕಾರ್ಯವನ್ನು ನೆರವೇರಿಸಿದ್ದಾರೆ.
ಇಂದು ಪುನೀತ್ ರಾಜ್ ಕುಮಾರ್ ನಿಧರಾಗಿ 11ನೇ ದಿನದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಬಳಿಗೆ ತೆರಳಿದ್ದ ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಅವರು, ಕಾವೇರಿ ಸಂಗಮ ಕ್ಷೇತ್ರದಲ್ಲಿ ಮೃತ ಪುನೀತ್ ರಾಜ್ ಕುಮಾರ್ ಗೆ ವೈದಿಕ ಪೂಜಾ ಕೈಂಕರ್ಯ ನೆರವೇರಿಸಿ, ತರ್ಪಣ ಅರ್ಪಿಸಿದರು.
ಅಲ್ಲದೆ, ಅಶ್ಲೇಷಾ ಬಲಿ ಹಾಗೂ ನಾರಾಯಣ ಬಲಿ ಪೂಜೆ ಕೂಡ ನೆರವೇರಿಸಿ, ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಶಾಂತಿಯನ್ನು ಕೋರಿದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement