ಬಂಡಿಪುರ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಗೇಟನ್ನು ಮನುಷ್ಯರಂತೆ ದಾಟಿದ ಆನೆ… ವ್ಹಾ ಎನ್ನಲೇಬೇಕು..! ವೀಕ್ಷಿಸಿ

ಚಾಮರಾಜನಗರ: ನಾವು ಮುಂದುವರಿದಂತೆ ಕಾಡುಪ್ರಾಣಿಗಳು ಈ ಆಧುನಿಕ ಪ್ರಪಂಚದಲ್ಲಿ ಹೇಗೆ ಬದುವುದು ಎಂಬುದನ್ನು ಕಲಿತುಕೊಳ್ಳುತ್ತಿವೆ. ಹೀಗಾಗಿ ಅವುಗಳು ಸಹ ಈಗ ಕಾಡಿನಿಂದ ನಾಡಿಗೂ ಆಗಮಿಸುತ್ತಿವೆ. ನಾವು ಎಷ್ಟೇ ತಡೆಗಳನ್ನು ಒಡ್ಡಿದರೂ ಅದನ್ನು ದಾಟಿಕೊಂಡು ಅವರು ಬರುತ್ತಿವೆ.
ಇಂಥದೊಂದು ನಿದರ್ಶನವನ್ನು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಸಾಬೀತುಪಡಿಸಿದೆ. ಆನೆಗಳು ದಾಟಿ ಬರಬಾರದು ಎಂದೇ ರೈಲ್ವೆಯವರು ನಿರ್ಮಾಣ ಮಾಡಿದ್ದ ಬಲಿಷ್ಠ ಬ್ಯಾರಿಕೇಡನ್ನೇ ಆನೆಯೊಂದು ಮನುಷ್ಯರಂತೆ ದಾಟಿದೆ. ರೈಲ್ವೆಯವರು ನಿರ್ಮಿಸಿದ ದೊಡ್ಡದೊಡ್ಡ ಕಬ್ಬಿಣದ ಕಂಬಿಗಳ ಗೇಟನ್ನೇ ಈ ಆನೆ ಬುದ್ಧಿವಂತಿಕೆಯಿಂದ ದಾಟಿದೆ. ಆನೆ ಗೇಟುನ್ನು ಬುದ್ಧಿವಂತಿಕೆ ಉಪಯೋಗಿಸಿ ದಾಟುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಇದನ್ನು ನೋಡಿದವರೇ ಆನೆಯ ಸಾಹಸಕ್ಕೆ ಬೆರಗಾಗಿದ್ದಾರೆ.

 

3.7 / 5. 3

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

ನಿಮ್ಮ ಕಾಮೆಂಟ್ ಬರೆಯಿರಿ

advertisement