ತನ್ನ ಮದುವೆಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುವಕನ ಮೇಲೆ ಆಸಿಡ್ ಎರಚಿದ ಎರಡು ಮಕ್ಕಳ ತಾಯಿ..!

ಕೊಚ್ಚಿ :ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ 35 ವರ್ಷದ ಎರಡು ಮಕ್ಕಳ ತಾಯಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವಂತಪುರಂನ ಅರುಣ್ ಕುಮಾರ್ (28) ಅವರು ರಾಜ್ಯ ರಾಜಧಾನಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ನವೆಂಬರ್ 16 ರಂದು ಶೀಬಾ ಅವರ ಮುಖದ ಮೇಲೆ ಆಸಿಡ್ ಎರಚಿದ ನಂತರ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಫೇಸ್‌ಬುಕ್ ಮೂಲಕ ಭೇಟಿಯಾದರು, ಆದರೆ ನಂತರ ಅವಳಿಗೆ ಮದುವೆಯಾಗಿದ್ದು, ಎರಡು ಮಕ್ಕಳ ತಾಯಿ ಎಂದು ಗೊತ್ತಾದ ನಂತರ ಯುವಕ ಮದುವೆ ಪ್ರಸ್ತಾಪ ತಿರಸ್ಕಾ ಮಾಡಿದ್ದಾನೆ. ಆದರೆ ಅವಳು ಅವನನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದಳು ಮತ್ತು ಹಣಕ್ಕೆ ಒತ್ತಾಯಿಸಿದಳು. “ಪೊಲೀಸರು ಹೇಳಿದ್ದಾರೆ.
ಅರುಣ್‌ ಕುಮಾರ್‌ ಹಾಗೂ ಶಿಬಾ ಇಬ್ಬರಿಗೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿತ್ತು. ಪರಿಚಯ ನಂತರ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮದುವೆಯಾಗುವುದಕ್ಕೆ ನಿರ್ಧಾರ ಮಾಡಿದ್ದರು. ಆದರೆ ಶಿಬಾಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವ ವಿಷಯ ಗೊತ್ತಾದ ನಂತರ ಅರುಣಕುಮಾರ್‌ ಆಕೆಯ ಮದುವೆ ಪ್ರಸ್ತಾಪ ತಿರಸ್ಕರಿದ್ದಾನೆ.
ಅರುಣಕುಮಾರ್‌ ಬೇರೊಂದು ಹುಡುಗಿ ಮದುವೆಯಾಗುತ್ತಿದ್ದಾನೆ ಎಂಬುದು ಶಿಬಾಳ ಕೋಪಕ್ಕೆ ಕಾರಣವಾಯಿತು. ನಂತರದಲ್ಲಿ ಅವಳು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದಾಳೆ. ಹಾಗೂ ಶಿಬಾ ಹಣದ ಬೇಡಿಕೆಯಿಟ್ಟಿದ್ದಾಳೆ ಎಂದು ಅರುಣಕುಮಾರ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ಶಿಬಾ ನವೆಂಬರ್ 16 ರಂದು ಅರುಣಕುಮಾರಗೆ ಕರೆ ಮಾಡಿ ಆದಿಮಲಿ ಸಮೀಪದ ಇರುಂಪುಪಾಲಂನಲ್ಲಿರುವ ಸೇಂಟ್ ಆಂಟೋನಿ ಚರ್ಚ್ ಬಳಿ ಬರಲು ತಿಳಿಸಿದ್ದಾಳೆ. ಅರುಣ್‌ ಬರುತ್ತಿದ್ದಂತೆಯೇ ಆತನ ಮೇಲೆ ಆಸಿಡ್‌ ಎರಚಿದ್ದಾಳೆ. ಈ ಘಟನೆ ಸಂಪೂರ್ಣವಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಸಿಡ್‌ ದಾಳಿಯಿಂದ ಅರುಣಕುಮಾರ್‌ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿದ್ದು, ಶಿಬಾ ಮುಖ ಹಾಗೂ ಕೈಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಅರುಣಕುಮಾರ್ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಶಿಬಾಳನ್ನು ಆದಿಮಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement