ದಿಢೀರ್​ ಹವಾಮಾನ ವೈಪರೀತ್ಯವೇ ಸೇನಾ ಹೆಲಿಕಾಪ್ಟರ್ ಪತನಕ್ಕೆ ಕಾರಣ: ತನಿಖಾ ವರದಿ ಸಲ್ಲಿಕೆ

ನವದೆಹಲಿ: ಕಳೆದ ತಿಂಗಳು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಸೇರಿ ಹದಿನಾಲ್ಕು ಜನರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಮೋಡಗಳಲ್ಲಿ ಸಿಲುಕಿ ಭೂಪ್ರದೇಶಕ್ಕೆ ಅಪ್ಪಳಿಸಿತು ಎಂದು ತೀರ್ಮಾನಿಸಿದೆ ಎಂದು ತನಿಖಾ ತಂಡದ ಪ್ರಾಥಮಿಕ ತನಿಖೆ ತಿಳಿಸಿದೆ.
“ಪ್ರಾಥಮಿಕ ತನಿಖೆಯ ಪ್ರಕಾರ, ಅಪಘಾತಕ್ಕೆ ಯಾವುದೇ ತಾಂತ್ರಿಕ ವೈಫಲ್ಯ, ವಿಧ್ವಂಸಕ ಕೃತ್ಯ ಅಥವಾ ನಿರ್ಲಕ್ಷ್ಯ ಕಾರಣವಾಗಿಲ್ಲ.ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಅನಿರೀಕ್ಷಿತ ಬದಲಾವಣೆಯಿಂದಾಗಿ ಹೆಲಿಕಾಪ್ಟರ್‌ ಮೋಡಗಳನ್ನು ಪ್ರವೇಶಿಸಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ. ಹವಾಮಾನ ಬದಲಾವಣೆ ಪೈಲಟ್‌ನ ದಿಗ್ಭ್ರಮೆಗೆ ಕಾರಣವಾಗಿದ್ದು ನಿಯಂತ್ರಣದಲ್ಲಿದ್ದರೂ ಹೆಲಿಕಾಪ್ಟರ್‌ ಭೂಪ್ರದೇಶಕ್ಕೆ ಅಪ್ಪಳಿಸಲು ಕಾರಣವಾಯಿತು (CFIT)” ಎಂದು ಅಪಘಾತದ ಅತ್ಯಂತ ಸಂಭವನೀಯ ಕಾರಣವನ್ನು ನಿರ್ಧರಿಸಲು ಲಭ್ಯವಿರುವ ಎಲ್ಲಾ ಸಾಕ್ಷಿಗಳನ್ನು ಪ್ರಶ್ನಿಸಿದ ನಂತರ ಹಾಗೂ ವಿಮಾನದ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತಿತ ಡೇಟಾವನ್ನು ವಿಶ್ಲೇಷಿಸಿದ ನಂತರ ತಂಡವು ಕಂಡುಕೊಂಡಿದೆ.

ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ಪ್ರಕಾರ, ಈ ಪದವು ಭೂಪ್ರದೇಶ, ನೀರು ಅಥವಾ ಇನ್ನೊಂದು ಅಡಚಣೆಯೊಂದಿಗೆ ನಿಯಂತ್ರಣ ಕಳೆದುಕೊಂಡ ಸೂಚನೆಯಿಲ್ಲದೆ ಸಂಭವಿಸುವ ವಿಮಾನದಲ್ಲಿ ಅಪಘಾತಗಳನ್ನು ಸೂಚಿಸುತ್ತದೆ.ಅಂತಹ ಘಟನೆಗಳಲ್ಲಿನ ನಿರ್ಣಾಯಕ ವ್ಯತ್ಯಾಸವೆಂದರೆ ವಿಮಾನವು ವಿಮಾನ ಸಿಬ್ಬಂದಿಯ ನಿಯಂತ್ರಣದಲ್ಲಿರುತ್ತದೆ
ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 12 ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಹೊತ್ತೊಯ್ದ Mi-17V5 ಹೆಲಿಕಾಪ್ಟರ್ – ಕಳೆದ ವರ್ಷ ಡಿಸೆಂಬರ್ 8 ರಂದು ತಮಿಳುನಾಡಿನ ಕೊಯಮತ್ತೂರಿನ ಸೂಲೂರ್ ಏರ್ ಫೋರ್ಸ್ ಬೇಸ್‌ನಿಂದ ವೆಲ್ಲಿಂಗ್ಟನ್‌ನ ರಕ್ಷಣಾ ಸಿಬ್ಬಂದಿ ಸೇವಾ ಕಾಲೇಜುಗಳಿಗೆ ಹೋಗುವಾಗ ಪತನಗೊಂಡಿತ್ತು.
ಅಪಘಾತದಲ್ಲಿ ಸಿಡಿಎಸ್ ಜನರಲ್ ರಾವತ್, ಅವರ ಪತ್ನಿ ಮತ್ತು 11 ಮಂದಿ ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪವಾಡಸದೃಶ ರೀತಿಯಲ್ಲಿ ಅಪಘಾತದಲ್ಲಿ ಬದುಕುಳಿದಿದ್ದು, ಕೆಲವು ದಿನಗಳ ನಂತರ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು.
ದೇಶದ ಉನ್ನತ ಹೆಲಿಕಾಪ್ಟರ್ ಪೈಲಟ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ತ್ರಿ-ಸೇವಾ ನ್ಯಾಯಾಲಯವು Mi-17 V5 ಅಪಘಾತದ ಕುರಿತು ತನ್ನ ಪ್ರಾಥಮಿಕ ಸಂಶೋಧನೆಗಳನ್ನು ಸಲ್ಲಿಸಿದೆ. ಅಪಘಾತದ ಕಾರಣ ಯಾಂತ್ರಿಕ ವೈಫಲ್ಯ, ವಿಧ್ವಂಸಕ ಅಥವಾ ನಿರ್ಲಕ್ಷ್ಯವನ್ನು ಕೋರ್ಟ್‌ ಎನ್ಟ್ವೈರಿ ತಳ್ಳಿಹಾಕಿದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement