ಚುನಾವಣೆ ರ್ಯಾಲಿಗಳ ಮೇಲಿನ ನಿರ್ಬಂಧ ತೆರವು ಸಾಧ್ಯತೆ

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳ ಮೇಲಿನ ನಿರ್ಬಂಧ ತೆರವುಗೊಳಿಸುವ ಸಾಧ್ಯತೆಗಳಿವೆ. ಈ ಕುರಿತು ಪರಿಶೀಲನೆಗೆ ಚುನಾವಣಾ ಆಯೋಗ ಜ. 31ರಂದು ವರ್ಚುವಲ್ ಸಭೆ ನಡೆಸಲಿದೆ.
ಚುನಾವಣೆ ನಡೆಯುವ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ರಾಜ್ಯಗಳಲ್ಲಿ ಜ.31ರ ವರೆಗೆ ಭೌತಿಕ ರ್ಯಾಲಿ, ರೋಡ್ ಶೋ ನಡೆಸಲು ಚುನಾವಣಾ ಆಯೋಗ ನಿರ್ಬಂಧ ವಿಧಿಸಿತ್ತು. ಆದರೆ ನಿರ್ಬಂಧಗಳನ್ನು ಯಾವ ಮಟ್ಟಿಗೆ ಸಡಿಸಿಸಬಹುದು ಎಂಬ ಕುರಿತು ಈ ಸಭೆಯಲ್ಲಿ ಆಯೋಗ ನಿರ್ಧರಿಸಲಿದೆ. ಆಯಾ ರಾಜ್ಯಗಳ ಕೋವಿಡ್ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಆಯೋಗ ನಿರ್ಬಂಧ ಸಡಿಲಿಸುವ ಕುರಿತು ನಿರ್ಧರಿಸಲಿದೆ.
ಈ ನಡುವೆ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾಡ್ರಾ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಇತರ ಪ್ರಮುಖ ಪಕ್ಷಗಳ ಮುಖಂಡರು ಹಿಂದೆ ಬಿದ್ದಿಲ್ಲ. ಮನೆ ಮನೆ ಪ್ರಚಾರಕ್ಕೆ ಒತ್ತು ನೀಡುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement