ಕರ್ನಾಟಕದ 16 ಜಿಲ್ಲೆಗಳಲ್ಲಿ‌ ದೈನಂದಿನ ಕೊರೊನಾ ಸೋಂಕು ಶೂನ್ಯ..!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಇಳಿಕೆಯಾಗುತ್ತಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 106 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಂದು 4 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,420 ಕ್ಕೆ ಇಳಿಕೆಯಾಗಿದೆ. ಅವಧಿಯಲ್ಲಿ 337 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಸೋಂಕಿನಿಂದ ಮೃತಪಟ್ಟವರ ಪ್ರತಿಶತ ಸಂಖ್ಯೆ ಶೇ3.77 ರಷ್ಟು ಇದೆ.
ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ,, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ,ಧಾರವಾಡ, ಗದಗ, ಹಾಸನ, ಹಾವೇರಿ, ಕೊಪ್ಪಳ,ಮಂಡ್ಯ,ರಾಯಚೂರು, ಉಡುಪಿ,ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 61 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಹಾಗೂ 87 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ
ಬಾಗಲಕೋಟೆ- 0, ಬಳ್ಳಾರಿ – 3, ಬೆಳಗಾವಿ – 0, ಬೆಂಗಳೂರು ಗ್ರಾಮಾಂತರ- 0, ಬೆಂಗಳೂರು ನಗರ. – 61, ಬೀದರ್ 0, ಚಾಮರಾಜನಗರ- 0, ಚಿಕ್ಕಬಳ್ಳಾಪುರ- 0, ಚಿಕ್ಕಮಗಳೂರು- 1, ಚಿತ್ರದುರ್ಗ- 1, ದಕ್ಷಿಣ ಕನ್ನಡ – 6, ದಾವಣಗೆರೆ- 4,ಧಾರವಾಡ- 0,
ಗದಗ- 0, ಹಾಸನ- 0, ಹಾವೇರಿ- 1, ಕಲಬುರಗಿ- 1, ಕೊಡಗು- 3, ಕೋಲಾರ- 1, ಕೊಪ್ಪಳ- 0, ಮಂಡ್ಯ- 0, ಮೈಸೂರು- 11,
ರಾಯಚೂರು- 0, ರಾಮನಗರ – 1, ಶಿವಮೊಗ್ಗ- 8, ತುಮಕೂರು- 4, ಉಡುಪಿ- 0, ಉತ್ತರ ಕನ್ನಡ- 0, ವಿಜಯಪುರ – 1,ಯಾದಗಿರಿ- 0

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement