ಸಾಬರಮತಿ ಆಶ್ರಮದ ಪುನಾರಭಿವೃದ್ಧಿ ವಿರೋಧಿಸಿ ಸುಪ್ರೀಂಕೋರ್ಟ್‌ ಕದತಟ್ಟಿದ ಮಹಾತ್ಮ ಗಾಂಧಿ ಮರಿಮೊಮ್ಮಗ

ನವದೆಹಲಿ: ಸಾಬರಮತಿ ಆಶ್ರಮದ ಪ್ರಸ್ತಾವಿತ ಪುನರಾಭಿವೃದ್ಧಿ ಯೋಜನೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಹಾತ್ಮಾ ಗಾಂಧಿ ಅವರ ಮರಿ ಮೊಮ್ಮಗ ತುಷಾರ ಗಾಂಧಿ ಅವರು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.
ತುರ್ತಾಗಿ ಪ್ರಕರಣ ಆಲಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ಕೋರಿದರು. “ವರ್ಚುವಲ್‌ ವಿಚಾರಣೆಯ ದಿನದಂದು ಪ್ರಕರಣವನ್ನು ನಿಗದಿಪಡಿಸಿ. ಇನ್ನೇನು ನಿರ್ಮಾಣ ಕಾಮಗಾರಿ ಆರಂಭವಾಗುತ್ತದೆ” ಎಂದು ಅವರು ಮನವಿ ಮಾಡಿದರು.ಇದಕ್ಕೆ ಸಮ್ಮತಿಸಿದ ಸಿಜೆಐ ಅವರು ವರ್ಚುವಲ್‌ ವಿಚಾರಣೆಯ ದಿನದಂದು ಪ್ರಕರಣವನ್ನು ಪಟ್ಟಿ ಮಾಡಿ ಎಂದರು.
ಅಡ್ವೊಕೇಟ್‌ ಜನರಲ್‌ ಅವರ ಸೀಮಿತ ಹಾದಿತಪ್ಪಿಸುವ ಹೇಳಿಕೆಯನ್ನು ಪರಿಗಣಿಸಿ, ಅರ್ಜಿದಾರರ ಅಹವಾಲನ್ನು ಪರಿಗಣಿಸದೇ ಸರ್ಕಾರದ ಆದೇಶವನ್ನು ವಜಾ ಮಾಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಸಾಬರಮತಿ ಆಶ್ರಮವು ಒಂದು ಎಕರೆಯಲ್ಲಿ ವ್ಯಾಪಿಸಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆಶ್ರಮದ ಸುತ್ತಲಿನ 55 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ವಿವರಿಸಿದ್ದರು.
ಈ ಭೂಮಿಯು ಪ್ರೇರಣೆಯ ಚಿಲುಮೆಯಾಗಿದ್ದು, ಗಾಂಧೀಜಿಯ ಜೀವನ ಉದ್ದೇಶದ ಸ್ಮಾರಕವಾಗಿ ನಿಂತಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ. ಪುನರಾಭಿವೃದ್ಧಿಯಿಂದ ಸಾಬರಮತಿ ಆಶ್ರಮದ ನೋಟ ಬದಲಾಗಲಿದ್ದು, ಅದು ಗಾಂಧೀಜಿ ಅವರ ಸಿದ್ಧಾಂತದ ಭಾಗವಾಗಿದ್ದ ಸರಳತೆ, ಮಿತವ್ಯಯಕ್ಕೆ ವಿರುದ್ಧವಾಗಿರಲಿದೆ” ಎಂಬ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement