26/11 ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್ ಪಾಕಿಸ್ತಾನದ ಪ್ರಜೆ ಎಂದು 14 ವರ್ಷಗಳ ನಂತರ ಒಪ್ಪಿಕೊಂಡ ಪಾಕ್‌ ಸಚಿವ..ವೀಡಿಯೊ ವೀಕ್ಷಿಸಿ

2008 ನವೆಂಬರ್ 26/11ರ ಮುಂಬೈನ ಭಯೋತ್ಪಾದಕ ದಾಳಿಯನ್ನು ಯಾರೂ ಮರೆತಿಲ್ಲ. ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗವಾಗಿ ಬಂದಿದ್ದ ಭಯೋತ್ಪಾದಕರು, ಸುಮಾರು 174 ಅಮಾಯಕರನ್ನ ಹತ್ಯೆ ಮಾಡಿದ್ದರು.
ಪಾಕಿಸ್ತಾನದ ಲಷ್ಕರ್ ಏ ತಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್​ ಸಯೀದ್​ನಿಂದ ಕಳಿಸಲ್ಪಟ್ಟಿದ್ದವರಲ್ಲಿ ಈ ಭಯೋತ್ಪಾದಕರಲ್ಲಿ ಉಗ್ರ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ.
ಇತ್ತೀಚೆಗಷ್ಟೇ, ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅವರು ಮೃತ ಭಯೋತ್ಪಾದಕ ಅಜ್ಮಲ್ ಕಸಬ್ ಬಗ್ಗೆ ಉಲ್ಲೇಖಿಸಿದ್ದಾರೆ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಭಾರತಕ್ಕೆ ಆತ ಇರುವ ಸ್ಥಳವನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

26/11 ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆಪರೇಟರ್‌ಗಳಲ್ಲಿ ಒಬ್ಬನಾದ ಕಸಬ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಗೆ ಸೇರಿದ್ದರ ಬಗ್ಗೆ ವಿರೋಧ ಪಕ್ಷವು ಭಾರತೀಯ ಅಧಿಕಾರಿಗಳಿಗೆ ರಹಸ್ಯವನ್ನು ಬಹಿರಂಗಪಡಿಸಿತು.
ಅಜ್ಮಲ್ ಕಸಬ್ ಫರೀದ್ ಕೋಟ್ ನವ ಎಂದು ಭಾರತದೊಂದಿಗೆ ಹಂಚಿಕೊಂಡಿದ್ದು ನವಾಜ್ ಷರೀಫ್. ಕಸಬ್ ಬಗ್ಗೆ ಭಾರತಕ್ಕೆ ಹೇಳಿದ್ದು ಅವರೇ. ಫರೀದ್ ಕೋಟ್ ವಿಳಾಸವನ್ನು ನವಾಜ್ ಷರೀಫ್ ನೀಡಿದ್ದಾರೆ” ಎಂದು ಪಾಕಿಸ್ತಾನ ಸಚಿವರು ಆರೋಪಿಸಿದ್ದಾರೆ.
ಇದು ತಪ್ಪು ಮಾಹಿತಿಯಾಗಿದ್ದರೆ ನನ್ನನ್ನು ಕಳ್ಳನೆಂದು ಪರಿಗಣಿಸಿ ಮತ್ತು ನಾನು ಶಿಕ್ಷೆಯನ್ನು ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾರೆ.
ಭಯೋತ್ಪಾದನೆಗೆ ಧನಸಹಾಯ ಮತ್ತು ಅಕ್ರಮ ಹಣ ವರ್ಗಾವಣೆ ಕಾನೂನುಗಳನ್ನು ಸರಿಪಡಿಸಲು ವಿಫಲವಾದ ಮೇಲೆ ಪಾಕಿಸ್ತಾನವನ್ನು ಪ್ಯಾರಿಸ್ ಮೂಲದ ವಾಚ್‌ಡಾಗ್ ಎಫ್‌ಎಟಿಎಫ್ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ಗೆ ಸೇರಿಸಿದೆ.

26/11 ಮುಂಬೈ ಭಯೋತ್ಪಾದಕ ದಾಳಿ
2008 ರ ನವೆಂಬರ್‌ 26ರಂದು ದೇಶದ ಆರ್ಥಿಕ ರಾಜಧಾನಿಯನ್ನು ತಲ್ಲಣಗೊಳಿಸಿದ ದಾಳಿಯಲ್ಲಿ, ಛತ್ರಪತಿ ಶಿವಾಜಿ ಟರ್ಮಿನಸ್‌ನಂತಹ ಜನನಿಬಿಡ ಸ್ಥಳಗಳು, ತಾಜ್ ಹೋಟೆಲ್ ಮತ್ತು ಟವರ್, ಒಬೆರಾಯ್, ಮತ್ತು ಟ್ರೈಡೆಂಟ್ ಮತ್ತು ನಾರಿಮನ್ ಹೌಸ್‌ನಂತಹ ಐಷಾರಾಮಿ ಹೋಟೆಲ್‌ಗಳು ಪ್ರಮುಖ ಗುರಿಯಾಗಿದ್ದವು. ಹಣಕಾಸು ರಾಜಧಾನಿಯಲ್ಲಿ ಉದ್ದೇಶಿತ ಐಷಾರಾಮಿ ಸೈಟ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳು ಮತ್ತು ಗುಂಡಿನ ದಾಳಿಯಲ್ಲಿ 174 ಜನರು ಮೃತಪಟ್ಟಿದ್ದರು ಮತ್ತು 300 ಜನರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ಬದುಕುಳಿದ ಏಕೈಕ ದಾಳಿಕೋರ ಅಜ್ಮಲ್ ಕಸಬ್, ತನ್ನ ಸಂಗಾತಿಗಳು ಮತ್ತು ತಾನು ಲಷ್ಕರ್-ಎ-ತೈಬಾಗೆ ಸೇರಿದ ಎಂದು ಭಾರತೀಯ ಅಧಿಕಾರಿಗಳಿಗೆ ತಿಳಿಸಿದ. 21 ನವೆಂಬರ್ 2021 ರಂದು, ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕ್ಷಮಾದಾನದ ಮನವಿಯನ್ನು ತಿರಸ್ಕರಿಸಿದ ನಂತರ, ಕಸಬ್‌ಗೆ ಪುಣೆಯ ಯರವಾಡ ಕೇಂದ್ರ ಕಾರಾಗೃಹದಲ್ಲಿ ಮರಣದಂಡನೆ ವಿಧಿಸಲಾಯಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement