ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ನೆರವಿಗೆ ಬಂದ ದೊಡ್ಡಣ್ಣ ಭಾರತಕ್ಕೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟ್ ದಂತಕಥೆ ಜಯಸೂರ್ಯ

ಕೊಲಂಬೊ: ಭಾರತವನ್ನು “ದೊಡ್ಡಣ್ಣ (big brother) ಎಂದು ಕರೆದ ಶ್ರೀಲಂಕಾದ ಮಾಜಿ ಸಿಡಿಲಬ್ಬರ ಕ್ರಿಕೆಟ್‌ ಆಟಗಾರ ಸನತ್ ಜಯಸೂರ್ಯ, ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿ ವಿವಿಧ ನೆರವು ನೀಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ನಮ್ಮ ದೇಶದ ನೆರೆಯವರಾಗಿ ಮತ್ತು ನಮ್ಮ ದೇಶದ ದೊಡ್ಡಣ್ಣನಾಗಿ, ಭಾರತವು ಯಾವಾಗಲೂ ನಮಗೆ ಸಹಾಯ ಮಾಡಿದೆ. ನಾವು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ. ಪ್ರಸ್ತುತ ಸನ್ನಿವೇಶದಿಂದಾಗಿ ನಮಗೆ ಬದುಕುವುದು ಸುಲಭವಲ್ಲ. ನಾವು ಭಾರತ ಮತ್ತು ಇತರ ದೇಶಗಳ ಸಹಾಯದಿಂದ ಇದರಿಂದ ಹೊರಬರಲು ಆಶಿಸುತ್ತೇವೆ ಅವರು ಹೇಳಿದ್ದಾರೆ.

ತೀವ್ರ ವಿದ್ಯುತ್ ಅಭಾವಕ್ಕೆ ಸಾಕ್ಷಿಯಾಗಿರುವ ದ್ವೀಪ ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟನ್ನು ನಿವಾರಿಸಲು ಭಾರತವು ಶ್ರೀಲಂಕಾಕ್ಕೆ ಇದುವರೆಗೆ 2,70,000 ಮೆಟ್ರಿಕ್‌ ಟನ್‌ (MT ) ಇಂಧನವನ್ನು ಪೂರೈಸಿದೆ. ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆಯೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ, ಇದು ದ್ವೀಪ ರಾಷ್ಟ್ರದ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರಿದೆ. ಕೋವಿಡ್‌-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಆರ್ಥಿಕತೆಯು ತೀವ್ರ ಬಿಕ್ಕಟ್ಟಿನಲ್ಲಿದೆ.
ಇಂಧನಕ್ಕಾಗಿ ಭಾರತೀಯ ಕ್ರೆಡಿಟ್ ಲೈನ್ ಕಳೆದ 24 ಗಂಟೆಗಳಲ್ಲಿ ಶ್ರೀಲಂಕಾಕ್ಕೆ 36,000 MT ಪೆಟ್ರೋಲ್ ಮತ್ತು 40,000 MT ಡೀಸೆಲ್‌ ತಲುಪಿಸಿದೆ. ಭಾರತದ ನೆರವಿನ ಅಡಿಯಲ್ಲಿ ವಿವಿಧ ರೀತಿಯ ಇಂಧನದ ಒಟ್ಟು ಪೂರೈಕೆಯು ಈಗ 2,70,000 MT ಗಿಂತಲೂ ಹೆಚ್ಚಿದೆ ಎಂದು ಕೊಲಂಬೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಶ್ರೀಲಂಕಾದ ರಾಷ್ಟ್ರೀಯ ಕಣ್ಣಿನ ಆಸ್ಪತ್ರೆಯ ನಿರ್ದೇಶಕರು ಔಷಧಗಳ ತೀವ್ರ ಅಭಾವ ಎದುರಿಸುತ್ತಿರುವ ಶ್ರೀಲಂಕಾಕಕ್ಕೆ ಔಷಧಿಗಳನ್ನು ಪೂರೈಸಿದ್ದಕ್ಕೆ ಭಾರತಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಮಯೋಚಿತ ಸಹಾಯವು ಆರೋಗ್ಯ ಸೌಲಭ್ಯಗಳ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿದೆ ಎಂದು ಹೇಳಿದ್ದಾರೆ.
ನಮ್ಮ ಹೆಚ್ಚಿನ ಔಷಧಿಗಳು ಭಾರತದ ಕ್ರೆಡಿಟ್ ಲೈನ್ ಅಡಿಯಲ್ಲಿ ಭಾರತದಿಂದ ಬರುತ್ತಿವೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಪೂರೈಕೆಯು ನಮಗೆ ಬರಲಿದೆ. ಇದು ನಮಗೆ ಉತ್ತಮ ಸಹಾಯವಾಗಿದೆ. ಬೆಂಬಲಕ್ಕಾಗಿ ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ” ಎಂದು ಕೊಲಂಬೊದ ರಾಷ್ಟ್ರೀಯ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ ದಮ್ಮಿಕಾ ಎಎನ್‌ಐಗೆ ತಿಳಿಸಿದ್ದಾರೆ.

ಭಾರತವು ಕೊಲಂಬೊಗೆ ಹಣಕಾಸಿನ ನೆರವು ನೀಡುತ್ತಿರುವುದರಿಂದ, ದ್ವೀಪ ರಾಷ್ಟ್ರದ ಮುಳುಗುತ್ತಿರುವ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡಲು ಭಾರತವು ಶ್ರೀಲಂಕಾಕ್ಕೆ ಮತ್ತೊಂದು 1 ಶತಕೋಟಿ ಅಮೆರಿಕನ್‌ ಸಾಲವನ್ನು ಘೋಷಿಸಿದೆ. ಕೊಲಂಬೊಗೆ $1 ಬಿಲಿಯನ್ ಸಾಲವು ಅವರ ಆಹಾರದ ಬೆಲೆಗಳು ಮತ್ತು ಇಂಧನ ವೆಚ್ಚಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರತಿಭಟನೆಗಳಿಂದಾಗಿ ಕೊಲಂಬೊದಲ್ಲಿರುವ ಹಲವಾರು ಹೋಟೆಲ್‌ಗಳು ಭಾರಿ ನಷ್ಟವನ್ನು ಅನುಭವಿಸಿವೆ. ಕೋವಿಡ್ ಸಾಂಕ್ರಾಮಿಕದ ನಂತರ ನಿಧಾನವಾಗಿ ಪುನರುಜ್ಜೀವನಗೊಳ್ಳುತ್ತಿದ್ದ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುವ ದೇಶದ ಪ್ರವಾಸೋದ್ಯಮ ಕ್ಷೇತ್ರವು ಈಗ ತೀವ್ರವಾಗಿ ಹೊಡೆದಿದೆ.
ಏತನ್ಮಧ್ಯೆ, ವಿಶ್ವವಿದ್ಯಾಲಯದ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಗುಂಪು ಬುಧವಾರ ಸರ್ಕಾರದ ವಿರುದ್ಧ ಪ್ರತಿಭಟನಾ ಪ್ರದರ್ಶನವನ್ನು ನಡೆಸಿತು. ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಒತ್ತಾಯಿಸಿ ದ್ವೀಪ ರಾಷ್ಟ್ರದಲ್ಲಿ ಸರ್ಕಾರದ ವಿರೋಧಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement