ಮುಂಬೈನಲ್ಲಿ ಹಳಿತಪ್ಪಿದ ಪುದುಚೇರಿ ಎಕ್ಸ್‌ಪ್ರೆಸ್‌ನ 3 ಕೋಚ್‌ಗಳು…ವೀಕ್ಷಿಸಿ

ಮುಂಬೈ: ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಮುಂಬೈನ ಮಾತುಂಗಾ ನಿಲ್ದಾಣದಲ್ಲಿ ಶನಿವಾರ ರಾತ್ರಿ ಹಳಿತಪ್ಪಿದ ನಂತರ ಅದರ ಬೋಗಿಗಳು ಸಮಾನಾಂತರ ಟ್ರ್ಯಾಕ್‌ನಲ್ಲಿ ಮತ್ತೊಂದು ರೈಲಿಗೆ ಗುದ್ದಿದೆ.

ಅಪಘಾತ ಸ್ಥಳದ ವೀಡಿಯೊ ಹೊರಬಿದ್ದಿದ್ದು, ಅರೇ ಪೀಚೆ ಹೋ ಪೀಚೆ, ಗಾಡಿ ತುಕಿ (ಹಿಂತಿರುಗಿ, ಹಿಂತಿರುಗಿ, ರೈಲು ಈಗಷ್ಟೇ ಡಿಕ್ಕಿ ಹೊಡೆದಿದೆ)” ಎಂದು ವ್ಯಕ್ತಿಯೊಬ್ಬರು ಕೂಗುತ್ತಿರುವುದು ವೀಡಿಯೋದಲ್ಲಿ ಕೇಳಿಬರುತ್ತಿದೆ.
ದಾದರ್ ಟರ್ಮಿನಸ್‌ನಿಂದ ಪುದುಚೇರಿಗೆ ರೈಲು ಹೊರಟ ನಂತರ ರಾತ್ರಿ 9:45 ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರುವ ವರದಿಗಳಿಲ್ಲ.

ಸೇವೆಗಳ ಮರುಸ್ಥಾಪನೆಗಾಗಿ ಪರಿಹಾರ ರೈಲುಗಳನ್ನು ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮಾನವ ದೋಷ ಎಂದು ಹೇಳಲಾಗಿದೆ ಎಂದು ಕೇಂದ್ರ ರೈಲ್ವೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಹಿರಿಯ ಜಿಆರ್‌ಪಿ ಅಧಿಕಾರಿಗಳು ಸಿಕ್ಕಿಬಿದ್ದ ಪ್ರಯಾಣಿಕರಿಗೆ ಸಹಾಯ ಮಾಡಲು ರೈಲ್ವೆ ಆಡಳಿತದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement