ಪಾಕಿಸ್ತಾನ: 37 ಸದಸ್ಯರ ಸಂಪುಟ ಪ್ರಮಾಣ ವಚನ ಸ್ವೀಕಾರ, ಸದ್ಯಕ್ಕೆ ಹೊರಗುಳಿದ ಬಿಲಾವಲ್ ಭುಟ್ಟೊ

ನವದೆಹಲಿ: ಮುಂದಿನ ವಿದೇಶಾಂಗ ಸಚಿವ ಎಂದು ಬಿಂಬಿಸಲಾಗಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ. ನಂತರದ ದಿನಗಳಲ್ಲಿ ಭುಟ್ಟೊ ಸಂಪುಟ ಸೇರಬಹುದು ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಂಪುಟದಲ್ಲಿ ಮೂವತ್ತೊಂದು ಕ್ಯಾಬಿನೆಟ್‌ ಮಂತ್ರಿಗಳು, ಮೂವರು ರಾಜ್ಯ ಸಚಿವರು ಮತ್ತು ಮೂವರು ಸಲಹೆಗಾರರು ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದವರಲ್ಲಿ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಬಿ) ನ 14 ಸಚಿವರು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಒಂಬತ್ತು ಮಂದಿ ಮತ್ತು ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್‌ನ ನಾಲ್ವರು ಸಚಿವರು ಸೇರಿದ್ದಾರೆ.

ಏಪ್ರಿಲ್ 11 ರಂದು ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಷರೀಫ್ ಹೊಸ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
44 ವರ್ಷದ ಹಿನಾ ರಬ್ಬಾನಿ ಖಾರ್ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದಾರೆ. 2008 ರಿಂದ 2011 ರವರೆಗೆ ಪ್ರಧಾನಿ ಯೂಸುಫ್ ರಜಾ ಗಿಲಾನಿ ನೇತೃತ್ವದಲ್ಲಿ ವಿದೇಶಾಂಗ ಸಚಿವರಾಗಿದ್ದ ಖಾರ್ ಅವರು ಎರಡನೇ ಬಾರಿಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

ನೂತನ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಬೇಕಿದ್ದ ಅಧ್ಯಕ್ಷ ಆರಿಫ್ ಅಲ್ವಿ ಸೋಮವಾರ ಆರೋಗ್ಯ ಸಮಸ್ಯೆಗಳ ಕಾರಣ ರಜೆ ಮೇಲೆ ತೆರಳಿದ್ದರು. ಇದು ಪ್ರಮಾಣ ವಚನವನ್ನು ಒಂದು ದಿನ ಮುಂದೂಡಿತು. ಪ್ರೆಸಿಡೆನ್ಸಿಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸೆನೆಟ್ ಅಧ್ಯಕ್ಷ ಸಾದಿಕ್ ಸಂಜರಾನಿ ವಹಿಸಿ ನೂತನ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಿದರು.
ಷರೀಫ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಪುಟ ರಚನೆಯು ಒಂದು ವಾರಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು. ಷರೀಫ್ ಅವರು ತಮ್ಮ ಮಿತ್ರಪಕ್ಷಗಳೊಂದಿಗೆ ಸಚಿವಾಲಯ ಹಂಚಿಕೆಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ಕೆಲವು ಮಿತ್ರಪಕ್ಷಗಳು ಹೊಸ ಸಚಿವರ ಪಟ್ಟಿಯಿಂದ ಅತೃಪ್ತರಾಗಿದ್ದರೆ, ಕೆಲವರು ತಮ್ಮ ಸ್ವಂತ ಸಮಸ್ಯೆಗಳಿಗಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬಲೂಚಿಸ್ತಾನದಲ್ಲಿ ಹಿಂಸಾಚಾರವನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ ಎಂದು ಆರೋಪಿಸಿ ಬಲೂಚಿಸ್ತಾನ್ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಪ್ರಕ್ರಿಯೆಯಿಂದ ದೂರ ಉಳಿದಿದೆ.
ಅದೇ ರೀತಿ, JUI-F ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಅವರು ಸಚಿವಾಲಯಗಳ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಕಾರಣ ತಕ್ಷಣವೇ ಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ವಿವಾದಾತ್ಮಕ ಪ್ರಾಂತೀಯ ಅಸೆಂಬ್ಲಿ ಮತದಾನದಲ್ಲಿ ಹಾಲಿ ಪ್ರಧಾನಿಯವರ ಪುತ್ರ ಹಮ್ಜಾ ಶೆಹಬಾಜ್ ಷರೀಫ್ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಇಮ್ರಾನ್ ಖಾನ್ ಅವರ ಪಿಟಿಐನಿಂದ ಪಂಜಾಬ್‌ನ ಗವರ್ನರ್ ಓಮರ್ ಸರ್ಫ್ರಾಜ್ ಚೀಮಾ ಅವರು ತಮ್ಮ ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆಯ ಕಾರಣದಿಂದ ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಲು ನಿರಾಕರಿಸಿದರು. ರಾಜ್ಯಪಾಲರನ್ನು ವಜಾಗೊಳಿಸಲಾಗಿದೆ, ಆದರೆ ಅಧ್ಯಕ್ಷ ಅಲ್ವಿ ವಜಾ ಸಾರಾಂಶಕ್ಕೆ ಇನ್ನೂ ಸಹಿ ಹಾಕಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement