ಸ್ನಾನಕ್ಕೆ ತೆರಳಿದ್ದ ಪೀತಾಂಬರೇಶ್ವರ ಆಶ್ರಮದ ನಾಲ್ವರು ಬಾಲಕಿಯರು ಕಾಲುವೆ ನೀರಿನ ಪಾಲು

ಖಾಂಡ್ವಾ (ಮಧ್ಯಪ್ರದೇಶ): ಜಿಲ್ಲೆಯ ಓಂಕಾರೇಶ್ವರ ಪ್ರದೇಶದಲ್ಲಿರುವ ಕೋಠಿ ಗ್ರಾಮದಲ್ಲಿ ಓಂಕಾರೇಶ್ವರ ಅಣೆಕಟ್ಟಿನ ಕಾಲುವೆಯಲ್ಲಿ ಸಾಧ್ವಿ ಋತಂಬರ ಪೀತಾಂಬರೇಶ್ವರ ಆಶ್ರಮದ ನಾಲ್ವರು ಹುಡುಗಿಯರು ಮುಳುಗಿ ಮೃತಪಟ್ಟಿದ್ದಾರೆ
ಬುಧವಾರ ಬೆಳಗ್ಗೆ 6 ಗಂಟೆಗೆ 6 ಬಾಲಕಿಯರು ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಕಾಲುವೆಯ ರೇಲಿಂಗ್​ಗೆ ಕಟ್ಟಿದ್ದ ಚೈನ್ ಹಿಡಿದುಕೊಂಡು ಎಲ್ಲರೂ ಸ್ನಾನ ಮಾಡುತ್ತಿದ್ದರು. ಆಗ ಚೈನ್‌ ಒಬ್ಬ ಹುಡುಗಿಯ ಕೈ ತಪ್ಪಿದೆ. ಕಾಲುವೆಯಲ್ಲಿ ಹರಿಯುವ ನೀರಿನ ವೇಗಕ್ಕೆ ಬಾಲಕಿ ಸಿಲುಕಿಕೊಂಡು ರಕ್ಷಣೆಗಾಗಿ ಕೂಗಿದ್ದಾಳೆ.

ಮುಳುಗುತ್ತಿರುವುದನ್ನು ನೋಡಿದ ಸ್ನೇಹಿತೆ ಆಕೆಯನ್ನು ಕಾಪಾಡಲು ಕಾಲುವೆಗೆ ಹಾರಿದ್ದಾರೆ. ಆಕೆಯನ್ನು ರಕ್ಷಿಸಲು ಪ್ರಯತ್ನಿಸುವ ಭರದಲ್ಲಿ ಒಬ್ಬರಂತೆ ಒಬ್ಬರು ಕಾಲುವೆ ಹಾರಿದ್ದು, ಅವರೆಲ್ಲರೂ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ದೊರೆತ ತಕ್ಷಣ ಕೆಲವರು ಬಾಲಕಿಯರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಇನ್ನೂ ಕೆಲವರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ಕೂಡಲೇ ಮಾಂಧಾಟ ಮತ್ತು ಮೋರ್ಟಕ್ಕ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರು ಮತ್ತು ಮುಳುಗುಗಾರರ ಸಹಾಯದಿಂದ ಒಂದು ಗಂಟೆಗೂ ಹೆಚ್ಚು ಕಾಲ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ಕಾಯಾಚರಣೆಯಲ್ಲಿ ಇಬ್ಬರು ಹುಡುಗಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಆದರೆ ಆ ನಾಲ್ವರು ಬಾಲಕಿಯರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

ಮೃತರು ಬಡಿಯಾ ಗ್ರಾಮದ ನವಲ್​ ಪುತ್ರಿ ವೈಶಾಲಿ (12), ಸೋಮವಾಡ ಗ್ರಾಮದ ಕಾಂಚನಾ ರಮೇಶ್ (11) , ದಭಡ್ ಗ್ರಾಮದ ಪ್ರತೀಕ್ಷಾ ಛಾನಿಯಾ (12), ಇಂದ್ರಾಪುರ ರಹಾತಿಯಾ ಗ್ರಾಮದ ದಿವ್ಯಾನ್ಸಿ ಚೇತಕ್ (10) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಓಂಕಾರೇಶ್ವರ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಡಿಒಪಿ ರಾಕೇಶ್ ಪೇಂದ್ರ ತಿಳಿಸಿದ್ದಾರೆ. ಈ ಅಪಘಾತದ ನಂತರ ಆಶ್ರಮದಲ್ಲಿ ಶೋಕ ಮಡುಗಟ್ಟಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement