ಹರಿಯಾಣ: ಸ್ಫೋಟಕಗಳೊಂದಿಗೆ ಸಿಕ್ಕಿಬಿದ್ದ ಪಾಕ್ ನಂಟು ಹೊಂದಿದ 4 ಶಂಕಿತ ಭಯೋತ್ಪಾದಕರು, ಇವರಿಗೆ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳ ಪೂರೈಕೆ…!

ಚಂಡೀಗಡ: ನಾಲ್ವರು ಶಂಕಿತ ‘ಖಲಿಸ್ತಾನಿ’ ಭಯೋತ್ಪಾದಕರನ್ನು ಹರಿಯಾಣದ ಕರ್ನಾಲ್ ನಲ್ಲಿ ಬಂಧಿಸಲಾಗಿದೆ. ಡ್ರೋನ್‌ಗಳ ಮೂಲಕ ಅವರಿಗೆ ಶಸ್ತ್ರಾಸ್ತ್ರ ರವಾನೆ ಮಾಡಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಇವರು ಮಹಾರಾಷ್ಟ್ರದ ನಾಂದೇಡ್ ಮತ್ತು ತೆಲಂಗಾಣದ ಆದಿಲಾಬಾದ್‌ಗೆ ಸ್ಫೋಟಕಗಳನ್ನು ತಲುಪಿಸಲು ಹೋಗುತ್ತಿದ್ದರು.
ಪ್ರಮುಖ ಆರೋಪಿ ಗುರ್‌ಪ್ರೀತ್ ಈ ಹಿಂದೆ ಜೈಲಿನಲ್ಲಿದ್ದು, ಅಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ರಾಜಬೀರ್‌ನನ್ನು ಭೇಟಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಶಂಕಿತರನ್ನು ಪಂಜಾಬ್‌ಗೆ ಸೇರಿದ ಗುರುಪ್ರೀತ್, ಅಮನದೀಪ್, ಪರ್ಮಿಂದರ್ ಮತ್ತು ಭೂಪಿಂದರ್ ಎಂದು ಗುರುತಿಸಲಾಗಿದೆ.
ಪೊಲೀಸರು ಒಂದು ಪಿಸ್ತೂಲ್ ಮತ್ತು 31 ಜೀವಂತ ಕಾಟ್ರಿಡ್ಜ್‌ಗಳು, 3 ಐಇಡಿಗಳು, 6 ಮೊಬೈಲ್ ಫೋನ್‌ಗಳು ಮತ್ತು 1.3 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಫಿರೋಜ್‌ಪುರ ಜಿಲ್ಲೆಯಲ್ಲಿ ಪಾಕಿಸ್ತಾನದ ಖಲಿಸ್ತಾನಿ ಭಯೋತ್ಪಾದಕ ಹರ್ಜಿಂದರ್ ಸಿಂಗ್ ರಿಂಡಾ ಎಂಬಾತ ಡ್ರೋನ್ ಬಳಸಿ ಶಸ್ತ್ರಾಸ್ತ್ರಗಳನ್ನು ಗಾಳಿಯಲ್ಲಿ ಬೀಳಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಂಡಾ ಅದಿಲಾಬಾದ್‌ನ ಸ್ಥಳದೊಂದಿಗೆ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಡ್ರೋನ್‌ ಮೂಲಕ ಶಾಸ್ತ್ರ ರವಾನೆ ಮಾಡಿದ್ದ. ಆರೋಪಿಗಳು ಈ ಹಿಂದೆ ಫಿರೋಜ್‌ಪುರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆದಿದ್ದರು.
ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಂಧಿತ ನಾಲ್ವರಲ್ಲದೆ, ಪಾಕಿಸ್ತಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಭಯೋತ್ಪಾದಕ, ಹರ್ವಿಂದರ್ ಸಿಂಗ್ ರಿಂಡಾ ಮತ್ತು ಬಟಾಲಾ ಮೂಲದ ರಾಜವೀರ್ ಸಿಂಗ್ ಕೂಡ ಎಫ್‌ಐಆರ್‌ನಲ್ಲಿದ್ದಾರೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

ಪಂಜಾಬ್‌ನಿಂದ ಪಾಕಿಸ್ತಾನಕ್ಕೆ: ಹರ್ಜಿಂದರ್ ಸಿಂಗ್ ಹೇಗೆ ಭಯೋತ್ಪಾದಕನಾದ…?
ಹರ್ಜಿಂದರ್ ಸಿಂಗ್ ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯವ. 11 ನೇ ವಯಸ್ಸಿನಲ್ಲಿ, ರಿಂಡಾ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದ ನಾಂದೇಡ್ ಸಾಹಿಬ್‌ಗೆ ಸ್ಥಳಾಂತರಗೊಂಡ. ಪೊಲೀಸ್ ದಾಖಲೆಗಳ ಪ್ರಕಾರ, ರಿಂಡಾ, 18ನೇ ವಯಸ್ಸಿನಲ್ಲಿ, ಕೌಟುಂಬಿಕ ಕಲಹಕ್ಕಾಗಿ ತರನ್ ತರನ್‌ನಲ್ಲಿ ತನ್ನ ಸಂಬಂಧಿಕರೊಬ್ಬರನ್ನು ಕೊಂದಿದ್ದ.
ನಾಂದೇಡ್ ಸಾಹಿಬ್‌ನಲ್ಲಿ, ಆತ ಸ್ಥಳೀಯ ವ್ಯಾಪಾರಿಗಳಿಂದ ಹಣವನ್ನು ಸುಲಿಗೆ ಮಾಡಲು ಪ್ರಾರಂಭಿಸಿದ ಮತ್ತು ಕನಿಷ್ಠ ಇಬ್ಬರನ್ನು ಕೊಂದ. ಒಂದು ಕಾಲದಲ್ಲಿ ವಿದ್ಯಾರ್ಥಿ ನಾಯಕ, ಪ್ರಸ್ತುತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಹರ್ಜಿಂದರ್ ಸಿಂಗ್ ಅಕಾ ರಿಂದಾ ಸಂಧು, ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಸೇರಿದಂತೆ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಚಂಡೀಗಡ ಪೊಲೀಸರಿಗೆ ಬೇಕಾಗಿದ್ದಾನೆ.

ಈ ಪ್ರಕರಣಗಳು 2016 ಮತ್ತು 2018ರ ನಡುವೆ ದಾಖಲಾಗಿವೆ. ರಿಂಡಾ ನಕಲಿ ಭಾರತೀಯ ಪಾಸ್‌ಪೋರ್ಟ್ ಬಳಸಿ ನೇಪಾಳದ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇವುಗಳಲ್ಲದೆ, ರಿಂಡಾ ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಮೂಲಗಳ ಪ್ರಕಾರ ಲಾಹೋರ್‌ನಲ್ಲಿರುವ 35 ವರ್ಷದ ಐಎಸ್‌ಐ ಗೂಂಡಾ ರಿಂಡಾ ಕಳೆದ ವರ್ಷ ನವೆಂಬರ್ 8 ರಂದು ನವನ್‌ಶಹರ್ ಅಪರಾಧ ತನಿಖಾ ಸಂಸ್ಥೆ (ಸಿಐಎ) ಕಟ್ಟಡದಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಶಂಕೆ ಇದೆ.
ಪಾಕಿಸ್ತಾನವನ್ನು ಪ್ರವೇಶಿಸಿದ ನಂತರ, ರಿಂಡಾ ಇತರ ‘ಖಲಿಸ್ತಾನಿ’ ಭಯೋತ್ಪಾದಕರೊಂದಿಗೆ ಪಂಜಾಬ್‌ನಲ್ಲಿ ಭಯೋತ್ಪಾದನೆಯ ಪುನರುಜ್ಜೀವನದ ಕಾರ್ಯವನ್ನು ನಿರ್ವಹಿಸಿದ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

ಸಿಎಂ ಖಟ್ಟರ್ ಹೇಳಿದ್ದೇನು?
ಬಂಧಿತ ಶಂಕಿತರು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಪಂಜಾಬ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಹರಿಯಾಣದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement