ವಿಘ್ನೇಶ್ ಕಸ್ಟಡಿ ಸಾವು: ಕೊಲೆ ಆರೋಪದ ಮೇಲೆ 6 ಪೊಲೀಸರ ಬಂಧನ

ಚೆನ್ನೈ: ವಿಘ್ನೇಶ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸ್ ಅಪರಾಧ ವಿಭಾಗ-ಅಪರಾಧ ತನಿಖಾ ವಿಭಾಗ(ಸಿಬಿ-ಸಿಐಡಿ)ವು ಕೊಲೆ ಆರೋಪದ ಮೇಲೆ ಆರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 25 ವರ್ಷದ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಬಂಧಿಸಲಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ) ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕರಿಗೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನು ಸೇರಿಸಲು ತನ್ನ ಶಿಫಾರಸನ್ನು ನೀಡಿದ ಒಂದು ದಿನದ ನಂತರ ಪ್ರಕರಣಕ್ಕೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ಸೇರಿಸಲಾಗಿದೆ.
ಬಂಧಿತ ಆರು ಪೊಲೀಸ್ ಸಿಬ್ಬಂದಿಯನ್ನು ಕಾನ್‌ಸ್ಟೆಬಲ್‌ಗಳಾದ ಮುನಾಫ್, ಪೊನ್ನರಾಜ್, ಹೆಡ್ ಕಾನ್‌ಸ್ಟೆಬಲ್ ಕುಮಾರ್, ಹೋಮ್ ಗಾರ್ಡ್ ದೀಪಕ್ ಮತ್ತು ಇಬ್ಬರು ಸಶಸ್ತ್ರ ಮೀಸಲು (ಎಆರ್) ಕಾನ್‌ಸ್ಟೆಬಲ್‌ಗಳು ಎಂದು ಗುರುತಿಸಲಾಗಿದೆ.
ಪೊಲೀಸರ ವಿರುದ್ಧ ಆರೋಪಗಳು ಮತ್ತು ಕಸ್ಟಡಿ ಸಾವನ್ನು ಮುಚ್ಚಿಹಾಕಲು ಅವರು ನಡೆಸಿದ ಪ್ರಯತ್ನಗಳ ನಂತರವಿಘ್ನೇಶ ಕಸ್ಟಡಿ ಸಾವಿನ ಪ್ರಕರಣವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಸಿಬಿ-ಸಿಐಡಿಗೆ ವರ್ಗಾಯಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಆಪಾದಿತ ಕಸ್ಟಡಿ ಸಾವಿನ ತನಿಖೆಗೆ ಸೇರಲು ಒಂಬತ್ತು ಪೊಲೀಸ್ ಅಧಿಕಾರಿಗಳಿಗೆ ಸಿಬಿ-ಸಿಐಡಿ ಶುಕ್ರವಾರ ಸಮನ್ಸ್ ನೀಡಿದೆ. ಒಂಬತ್ತು ಮಂದಿಯಲ್ಲಿ ಈವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ
ಪ್ರಕರಣ ಏನು?
ಏಪ್ರಿಲ್ 18 ರಂದು ವಿಘ್ನೇಶ ಮತ್ತು ಸುರೇಶ ಎಂಬ ಇಬ್ಬರು ಯುವಕರನ್ನು ವಾಹನ ತಪಾಸಣೆಯ ನಂತರ ಪೊಲೀಸರು ಬಂಧಿಸಿದರು. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ವಿಘ್ನೇಶ ಸರಿಯಾದ ಉತ್ತರ ನೀಡದ ಕಾರಣ ಮತ್ತು ಇಬ್ಬರೂ ಪ್ರಯಾಣಿಸಿದ ಆಟೋರಿಕ್ಷಾದಲ್ಲಿ ಗಾಂಜಾ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿದ್ದರಿಂದ ಅವರನ್ನು ಬಂಧಿಸಲಾಯಿತು.

ಅವರನ್ನು ಸೆಕ್ರೆಟರಿಯೇಟ್ ಕಾಲೋನಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಮತ್ತು ವಿಘ್ನೇಶ ಏಪ್ರಿಲ್ 19 ರಂದು ಸಾವಿಗೀಡಾದ. ನಂತರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾನ್‌ಸ್ಟೆಬಲ್ ಮತ್ತು ಗೃಹ ರಕ್ಷಕ ದಳದ ಸದಸ್ಯರನ್ನು ಅಮಾನತುಗೊಳಿಸಲಾಯಿತು ಮತ್ತು ಆರಂಭದಲ್ಲಿ ಶಂಕಿತ ಸಾವಿನ ಕುರಿತು ತನಿಖೆ ನಡೆಸಲಾಯಿತು. ಕಸ್ಟಡಿ ಸಾವುಗಳ ವಿರುದ್ಧದ ಆಕ್ರೋಶದ ನಂತರ ಪ್ರಕರಣವು ಸಿಬಿ-ಸಿಐಡಿಗೆ ಹೋಯಿತು.
ವಿಘ್ನೇಶನ ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ನಿಖರವಾದ ಕಾರಣವನ್ನು ನೀಡದಿದ್ದರೂ, 25 ವರ್ಷದ ಆತನ ದೇಹದ ಮೇಲೆ ಅನೇಕ ಗಾಯಗಳಿದ್ದವು ಮತ್ತು ಎಲುಬುಗಳು ಮುರಿದಿತ್ತು ಎಂದು ದೃಢಪಡಿಸಿದೆ.
ಮರಣೋತ್ತರ ಪರೀಕ್ಷೆಯ ವರದಿಯು ವಿಘ್ನೇಶನ ದೇಹದಾದ್ಯಂತ, ವಿಶೇಷವಾಗಿ ಅವನ ತಲೆಯ ಮೇಲೆ ಹಲವಾರು ಏಟುಗಳನ್ನು (1 cm ವರೆಗೆ) ಪಟ್ಟಿಮಾಡಿದೆ. ಬಲಗಾಲಿನಲ್ಲಿ ಮುರಿತವಿದೆ ಮತ್ತು ಸಾವಿನ ಮೊದಲು ಗಾಯಗಳು ಉಂಟಾಗಿದ್ದವು ಎಂದು ವರದಿ ಹೇಳಿದೆ.
ಶವಪರೀಕ್ಷೆಯು ಎಡಗಣ್ಣಿನ ಮೇಲೆ ಆಳವಾದ ಸ್ನಾಯುವಿನ ಗಾಯ, ರಕ್ತದಿಂದ ತುಂಬಿದ ಎಡ ಕೆನ್ನೆಯ ಮೇಲೆ ಊತ ಮತ್ತು ಬಲ ಮುಂದೋಳಿನ ಹಿಂಭಾಗ ಮತ್ತು ಕೆಳಗಿನ ಭಾಗದಲ್ಲಿ ಗಾಯಗಳನ್ನು ಬಹಿರಂಗಪಡಿಸಿತು.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement