ಹಿಮಾಚಲ ಅಸೆಂಬ್ಲಿ ಗೇಟ್‌ಗಳಿಗೆ ಖಲಿಸ್ತಾನಿ ಧ್ವಜ ಅಂಟಿಸಿದ ಆರೋಪ: ಪಂಜಾಬ್‌ನ ವ್ಯಕ್ತಿಯ ಬಂಧನ

ಶಿಮ್ಲಾ: ಹಿಮಾಚಲ ಪ್ರದೇಶ ಪೊಲೀಸರು ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ವಿಧಾನಸಭೆ ಕಟ್ಟಡದ ಮುಖ್ಯ ಗೇಟ್ ಮತ್ತು ಗೋಡೆಗಳ ಮೇಲೆ ಖಲಿಸ್ತಾನ್ ಧ್ವಜಗಳನ್ನು ಹಾಕಿದ್ದಕ್ಕಾಗಿ ಮೇ 11ರಂದು ಬುಧವಾರ ಪಂಜಾಬ್‌ನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಹಿಮಾಚಲದ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಪಂಜಾಬ್‌ನಿಂದ ಹರ್ವಿರ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಠಾಕೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು, ಸಿಂಗ್ ಅವರು ಧ್ವಜಗಳನ್ನು ಕಟ್ಟಿದ್ದಾಗಿ ಮತ್ತು ಅಸೆಂಬ್ಲಿ ಸಂಕೀರ್ಣದ ಗೇಟ್ ಮತ್ತು ಗೋಡೆಗಳ ಮೇಲೆ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಹಿಮಾಚಲ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, (ಹಿಮಾಚಲ ಪ್ರದೇಶ) ವಿಧಾನಸೌಧದ ಹೊರಗೆ ಖಲಿಸ್ತಾನ್ ಪರ ಹೇಳಿಕೆಗಳನ್ನು ಬರೆದಿದ್ದಕ್ಕಾಗಿ ಹರ್ವಿರ್ ಸಿಂಗ್ ಎಂಬಾತನನ್ನು ಇಲ್ಲಿನ ಸಕ್ಕರೆ ಕಾರ್ಖಾನೆಯ ಬಳಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿದೆ ಎಂದು ಮೊರಿಂಡಾ ಎಸ್‌ಎಚ್‌ಒ ಜಸ್ವಿಂದರ್ ಸಿಂಗ್ ತಿಳಿಸಿದ್ದಾರೆ.
“ಅವರು (ಹಿಮಾಚಲ ಪ್ರದೇಶ ಪೊಲೀಸರು) (ಹಿಮಾಚಲ ಪ್ರದೇಶ) ವಿಧಾನಸಭೆಯ ಹೊರಗೆ ಖಲಿಸ್ತಾನ್ ಪರ ಹೇಳಿಕೆಗಳನ್ನು ಬರೆದಿದ್ದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಹರ್ವಿರ್ ಸಿಂಗ್ ಅಲಿಯಾಸ್ ರಾಜು ಅವರನ್ನು ಕರೆದೊಯ್ದಿದ್ದಾರೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ಏತನ್ಮಧ್ಯೆ, ಎರಡನೇ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಶೀಘ್ರವೇ ಆತನನ್ನು ಹಿಡಿಯಲಾಗುವುದು ಎಂದು ಮುಖ್ಯಮಂತ್ರಿ ಠಾಕೂರ್ ಹೇಳಿದ್ದಾರೆ.
ಹಿಮಾಚಲ ಪ್ರದೇಶ ಪೊಲೀಸರು, ಸೋಮವಾರ, ಮೇ 9 ರಂದು ಧರ್ಮಶಾಲಾದಲ್ಲಿ ರಾಜ್ಯ ಅಸೆಂಬ್ಲಿ ಸಂಕೀರ್ಣದ ಹೊರಗೆ ಖಾಲಿಸ್ತಾನಿ ಧ್ವಜಗಳನ್ನು ಅಂಟಿಸಿದ ನಂತರ ನಿಷೇಧಿತ ಗುಂಪಿನ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕರಲ್ಲಿ ಒಬ್ಬರಾದ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
2007 ರಲ್ಲಿ ಅಮೆರಿಕದಲ್ಲಿ ಸ್ಥಾಪನೆಯಾದಸಿಖ್ಸ್ ಫಾರ್ ಜಸ್ಟಿಸ್ (SFJ) ದೇಶದಲ್ಲಿ “ಸ್ವತಂತ್ರ ಮತ್ತು ಸಾರ್ವಭೌಮ ದೇಶ” – ಖಲಿಸ್ತಾನ್ – ಸ್ಥಾಪಿಸಲು ಭಾರತದಿಂದ ಪಂಜಾಬ್‌ ಪ್ರತ್ಯೇಕವಾಗುವುದನ್ನು ಬಯಸುತ್ತದೆ. ಭಾರತದಲ್ಲಿ SFJ ಅನ್ನು ನಿಷೇಧಿಸಲಾಗಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement