ಅಗರ್ತಲಾ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ತ್ರಿಪುರಾ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಮಾಣಿಕ್ ಸಹಾ ಅವರು ಶನಿವಾರ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಪ್ಲಬ್ ಕುಮಾರ್ ದೇಬ್ ಅವರು ಮಧ್ಯಾಹ್ನ ರಾಜೀನಾಮೆ ನೀಡಿದ ನಂತರ ಸಂಜೆ ದಂತವೈದ್ಯ ಓದಿರುವ ಮಾಣಿಕ್ ಸಹಾ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಪ್ಲಬ್ ಕುಮಾರ್ ದೇಬ್ ಅವರು ಬಿಜೆಪಿಯ ತ್ರಿಪುರ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಮಾಣಿಕ್ ಸಹಾ ಅವರ ಹೆಸರನ್ನು ಬಿಪ್ಲಬ್ ದೇಬ್ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಸಂಜೆ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ತ್ರಿಪುರಾದಲ್ಲಿ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿ ಮತ್ತು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಸಭೆಯ ಕೇಂದ್ರ ವೀಕ್ಷಕರನ್ನಾಗಿ ಮಾಡಲಾಗಿತ್ತು.
ಮಾಣಿಕ್ ಸಾಹಾ ಯಾರು?
ಮಾಣಿಕ್ ಸಹಾ ಅವರು ಕಾಂಗ್ರೆಸ್ ತೊರೆದು 2016 ರಲ್ಲಿ ಬಿಜೆಪಿ ಸೇರಿದ್ದರು. ಅವರು 2020 ರಲ್ಲಿ ಬಿಜೆಪಿ ತ್ರಿಪುರಾ ಅಧ್ಯಕ್ಷರಾದರು.
ತ್ರಿಪುರಾದಲ್ಲಿ ನವೆಂಬರ್ 2021 ರಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಹದಿಮೂರು ನಾಗರಿಕ ಸಂಸ್ಥೆಗಳಲ್ಲಿ ಬಿಜೆಪಿಯ ಗೆಲುವಿಗೆ ಮಾಣಿಕ್ ಸಹಾ ಪ್ರಮುಖ ಪಾತ್ರ ವಹಿಸಿದರು.ಅವರು ತ್ರಿಪುರಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ.
ಮಾಣಿಕ್ ಸಹಾ ಅವರು ಬಿಜೆಪಿಯೊಳಗಿನ ಯಾವುದೇ ಪಾಳಯಕ್ಕೆ ಸೇರಿಲ್ಲ ಮತ್ತು ಪಕ್ಷದ ಮೂಲಗಳ ಪ್ರಕಾರ ತಟಸ್ಥ ಎಂದು ಪರಿಗಣಿಸಲಾಗಿದೆ.
ಮಾಣಿಕ್ ಸಹಾ ವೃತ್ತಿಯಲ್ಲಿ ದಂತವೈದ್ಯರು.
ನಿಮ್ಮ ಕಾಮೆಂಟ್ ಬರೆಯಿರಿ