ತನ್ನ ಶ್ರಾದ್ಧದ ದಿನವೇ ಪ್ರತ್ಯಕ್ಷನಾದ ಸತ್ತು ಹೋಗಿದ್ದ ಮಗ…!

ಅಗರ್ತಲಾ (ತ್ರಿಪುರ): ಸತ್ತು ಹೋಗಿದ್ದ ಮಗ, ತನ್ನ ತಿಥಿ ದಿನವೇ ಮನೆಗೆ ಬಂದ ವಿಲಕ್ಷಣ ಘಟನೆಯೊಂದು ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ.
ಮೋಹನಪುರ್‌ ಕಾಳಿಬಜಾರ್‌ನ ನಿವಾಸಿ ಆಗಿದ್ದ 22 ವರ್ಷದ ಆಕಾಶ ಸರ್ಕಾರ್‌ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೂ ದೂರು ನೀಡಿದ್ದರು. ಜೂನ್ 3ರಂದು ಅಗರ್ತಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೇಲರ್ಮತ್‌ ಬಳಿಯ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ, ಅದು ಕಾಣೆಯಾದ ಆಕಾಶ್‌ ಸರ್ಕಾರ್‌ ಶವ ಎಂದು ಎಂಬ ನಿರ್ಣಯಕ್ಕೆ ಬಂದ ಪೊಲೀಸರು ಕುಟುಂಬದವರಿಗೆ ಮಾಹಿತಿ ತಿಳಿಸಿದರು ಹಾಗೂ ಮೃತ ದೇಹ ಗುರುತು ಪತ್ತೆಗೆ ಆಸ್ಪತ್ರೆಗೆ ಕರೆಸಲಾಗಿತ್ತು.

ಆದರೆ, ಮಗನ ಶವ ಗುರುತು ಪತ್ತೆ ವೇಳೆ ತಂದೆ ಪ್ರಣಬ್‌, ಇದು ಮಗನ ಶವ ಅಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ಮಗನ ದೇಹಕ್ಕೂ, ಶವಕ್ಕೂ ಸಾಮ್ಯತೆ ಇಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ಪೊಲೀಸರು, ಶವ ನೀರಿನಲ್ಲಿ ಕೆಲ ದಿನಗಳ ಕಾಲ ಇದ್ದಿದ್ದರಿಂದ ಉಬ್ಬಿಕೊಂಡಿದೆ ಉತ್ತರಿಸಿದ್ದರು. ನಂತರ ಕುಟುಂಬದವರು ಪೊಲೀಸರ ಒತ್ತಾಯಕ್ಕೆ ಮಣಿದು ಶವ ಸಂಸ್ಕಾರ ಮಾಡಿದ್ದರು. ಈಗ ತಿಥಿ ಕಾರ್ಯ ಮಾಡುವಾಗ ಸತ್ತ ಮಗ ಮತ್ತೆ ಮರಳಿ ಬಂದಿದ್ದಾನೆ.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement