ಎಂದೂ ಕೇಳಿಲ್ಲ…: ಶರದ್ ಪವಾರ್ ವಿರುದ್ಧ ಟ್ವೀಟ್ ಮಾಡಿದ ವಿದ್ಯಾರ್ಥಿಯ ಬಂಧನಕ್ಕೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ

ಮುಂಬೈ: ಎನ್‌ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಟ್ವೀಟ್ ಮಾಡಿದ 21 ವರ್ಷದ ವಿದ್ಯಾರ್ಥಿ ನಿಖಿಲ್ ಭಾಮ್ರೆಯನ್ನು ಬಂಧಿಸಿದ್ದಕ್ಕಾಗಿ ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹಿರಿಯ ರಾಜಕಾರಣಿಯನ್ನು ಗುರಿಯಾಗಿಸಿಕೊಂಡು ತನ್ನ ಖಾತೆಯಿಂದ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ ನಂತರ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಭಾಮ್ರೆ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ IPC) 153, 153A, (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) 500, 501 (ಮಾನನಷ್ಟ), 504 (ಅಪರಾಧ ಬೆದರಿಕೆ), 505, 506 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಭಾಮ್ರೆ ಅವರ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಭಾಮ್ರೆ ವಿರುದ್ಧ ಎಫ್‌ಐಆರ್‌ಗಳು ದಾಖಲುಗೊಳ್ಳಲು ಟ್ವೀಟ್ ಯಾವ ರೀತಿಯಲ್ಲಿ ಆಧಾರವಾಗಿರಬಹುದು ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್ ಶಿಂಧೆ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಕೇಳಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
“ಪ್ರತಿದಿನ ನೂರಾರು, ಸಾವಿರಾರು ಟ್ವೀಟ್‌ಗಳನ್ನು ಮಾಡಲಾಗುತ್ತದೆ. ನೀವು ಪ್ರತಿ ಟ್ವೀಟನ್ನೂ ಗಣನೆಗೆ ತೆಗೆದುಕೊಳ್ಳುತ್ತೀರಾ? ಇಂತಹ ಎಫ್‌ಐಆರ್‌ಗಳು ನಮಗೆ ಬೇಡ. … ಇಂತಹದ್ದನ್ನು ಕೇಳಿಲ್ಲ… ವಿದ್ಯಾರ್ಥಿಯೊಬ್ಬನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ” ಎಂದು ಪೀಠ ಆಕ್ಷೇಪಿಸಿತು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

“48ನೇ ಪುಟದಲ್ಲಿ (ಭಾಮ್ರೆ ಅವರ ಮೊದಲ ಟ್ವೀಟ್ ಪ್ರಸ್ತಾಪವಾಗಿರುವ ಎಫ್‌ಐಆರ್‌ನ) ಯಾರನ್ನೂ ಹೆಸರಿಸದೇ ಒಂದು ತಿಂಗಳ ಕಾಲ ಜೈಲಿನಲ್ಲಿಡಲಾಗಿದೆ. ಇದು ಎಲ್ಲದಕ್ಕೂ ಹೇಗೆ ಆಧಾರವಾಗುತ್ತದೆ? ಪುಟ 48ರ ಪ್ರಕಾರ ಎಫ್‌ಐಆರ್‌ಗೆ ಕಾರಣವೇನು?” ಎಂದು ನ್ಯಾ. ಶಿಂಧೆ ಪ್ರಶ್ನಿಸಿದರು.
“ಈ ರೀತಿಯ ಕ್ರಮ ತೆಗೆದುಕೊಳ್ಳಲಾರಂಭಿಸಿದರೆ ನೀವು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ವ್ಯಕ್ತಿಯ (ಪವಾರ್) ಹೆಸರಿಗೆ ಧಕ್ಕೆ ತರುತ್ತೀರಿ. ಹಾಗೆ ವಿದ್ಯಾರ್ಥಿಯನ್ನು ಜೈಲಿನಲ್ಲಿರಿಸುವುದು ಮೇರು ವ್ಯಕ್ತಿತ್ವಕ್ಕೆ (ಪವಾರ್) ಕೂಡ ಇಷ್ಟವಾಗದು. ಮೇರು ವ್ಯಕ್ತಿತ್ವದ ಖ್ಯಾತಿ ಕಡಿಮೆಯಾಗುವುದು ನಮಗೆ ಇಷ್ಟವಿಲ್ಲ” ಎಂದು ನ್ಯಾಯಮೂರ್ತಿಗಳು ಹೇಳಿದರು ಎಂದು ವರದಿ ಹೇಳಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಪಡೆಯುವಂತೆ ಮತ್ತು ಭಾಮ್ರೆ ಬಿಡುಗಡೆಗೆ ಸರ್ಕಾರದ ಆಕ್ಷೇಪವಿಲ್ಲ ಎಂಬ ಹೇಳಿಕೆ ಪಡೆಯುವಂತೆ ವಿಚಾರಣೆಯನ್ನು ಮುಕ್ತಾಯಗೊಳಿಸುವ ಮೊದಲು, ನ್ಯಾ. ಶಿಂಧೆ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರಿಗೆ ಸೂಚಿಸಿದರು.
” ನಮ್ಮ ವಿನಮ್ರ ಅಭಿಪ್ರಾಯದಲ್ಲಿ ಹೇಳುವುದಾದರೆ ಸರ್ಕಾರ ಹೇಳಿಕೆ ನೀಡಿದರೆ ಅದರ ಗೌರವ ಉಳಿಯುತ್ತದೆ” ಎಂದು ಪೀಠ ತಿಳಿಸಿತು. ಜೂನ್ 16ಕ್ಕೆ ಅರ್ಜಿಯ ಮುಂದಿನ ವಿಚಾರಣೆ ನಿಗದಿಯಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement