ಕಾಶ್ಮೀರಿ ಪಂಡಿತರ ಹತ್ಯೆ- ಗೋವು ಸಾಗಿಸುವ ಮುಸ್ಲಿಂ ಡ್ರೈವರ್​ ಮೇಲಿನ ಹಲ್ಲೆ ಎರಡೂ ಒಂದೇ ತೆರನಾದುದು: ನಟಿ ಸಾಯಿ ಪಲ್ಲವಿ

ನವದೆಹಲಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಟಿ ಸಾಯಿ ಪಲ್ಲವಿ ಖಂಡಿಸಿದ್ದಾರೆ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಕಟುವಾಗಿ ಟೀಕಿಸಿದ್ದಾರೆ
ಕಾಶ್ಮೀರಿಗಳ ವಲಸೆಯನ್ನು ಗೋಸಂರಕ್ಷಕತೆಗೆ ಹೋಲಿಸಿದ್ದಾರೆ. “ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರಿ ಫೈಲ್ಸ್‌ ಚಿತ್ರ ತೋರಿಸಿವೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಒತ್ತಾಯಿಸಿದ ಘಟನೆ ನಡೆದಿದ್ದು, ಹಾಗಾದರೆ ಅದನ್ನು ಹಾಗೆಯೇ ಪರಿಗಣಿಸಬೇಕಾಗುತ್ತದೆ. ಈ ಎರಡು ಘಟನೆಗಳ ನಡುವಿನ ವ್ಯತ್ಯಾಸ ಎಲ್ಲಿದೆ ಎಂದು ನಟಿ ಸಾಯಿ ಪಲ್ಲವಿ ಪ್ರಶ್ನಿಸಿದ್ದಾರೆ.

ಅವರು ಸಂದರ್ಶನ ನೀಡಿರುವ ವೀಡಿಯೊ ವೈರಲ್ ಆಗಿದೆ. ಧೈರ್ಯದ ಹೇಳಿಕೆಗಾಗಿ ಕೆಲವು ನೆಟಿಜನ್‌ಗಳು ಅವರನ್ನು ಶ್ಲಾಘಿಸುತ್ತಿದ್ದರೆ, ಇತರರು ‘ಅಸೂಕ್ಷ್ಮ’ ಹೇಳಿಕೆಗಳಿಗಾಗಿ ಟ್ರೋಲ್ ಮಾಡುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಹೇಳಿರುವ ನಟಿ ಸಾಯಿ ಪಲ್ಲವಿ, ಪ್ರಸ್ತುತ ತಮ್ಮ ಮುಂಬರುವ ತೆಲುಗು ಚಿತ್ರ “ವಿರಾಟ ಪರ್ವಂ” ಪ್ರಚಾರದಲ್ಲಿದ್ದಾರೆ. ರಾಣಾ ದಗ್ಗುಬಾಟಿ ಸಹ ನಟರಾಗಿರುವ ಈ ಚಲನಚಿತ್ರವು 1990 ರ ದಶಕದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ತೆಲಂಗಾಣ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಹಿನ್ನೆಲೆಯಲ್ಲಿ ಪ್ರೇಮಕಥೆಯನ್ನು ನಿರೂಪಿಸುತ್ತದೆ.ಸಾಯಿ ಪಲ್ಲವಿ ಅವರು ನಕ್ಸಲ್ ನಾಯಕ ರಾವಣ್ಣ (ರಾಣಾ ದಗ್ಗುಬಾಟಿ) ಯನ್ನು ಪ್ರೀತಿಸುವ ವೆನ್ನೆಲಾ ಪಾತ್ರದಲ್ಲಿ ನಟಿಸಿದ್ದಾರೆ.

ಅವರ ರಾಜಕೀಯ ಒಲವಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ತಟಸ್ಥ ಕುಟುಂಬದಲ್ಲಿ ಬೆಳೆದವಳು ಮತ್ತು ಉತ್ತಮ ಮಾನವರಾಗಿರಲು ನನಗೆ ಕಲಿಸಿದರು ಎಂದು ನಟಿ ಹೇಳಿದ್ದಾರೆ. ನೋಯುತ್ತಿರುವವರನ್ನು ರಕ್ಷಿಸಬೇಕು ಎಂದು ನನಗೆ ಕಲಿಸಲಾಗಿದೆ, ದಮನಿತರನ್ನು ರಕ್ಷಿಸಬೇಕು ಎಂದು ಅವರು ಹೇಳಿದರು.
ಸಾಯಿ ಪಲ್ಲವಿಯವರ ಕಾಮೆಂಟ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಟ್ವಿಟರ್ ಬಳಕೆದಾರರು ಆಕೆಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಅವರನ್ನು ಟ್ರೋಲ್ ಮಾಡಿದ್ದಾರೆ.
ಸಾಯಿ ಪಲ್ಲವಿ ಅಭಿನಯದ “ವಿರಾಟ ಪರ್ವಂ” ಜೂನ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಮುಖ ಸುದ್ದಿ :-   ಇದು ಸಮಾಧಾನಕರ ಸುದ್ದಿ..: ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement