ಧಾರವಾಡ:ಜೆಎಸ್‌ಎಸ್ ಹುಕ್ಕೇರಿಕರ್ ಕಾಲೇಜಿನ ಐವರು ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್

ಧಾರವಾಡ: ಧಾರವಾಡದ ಜೆಎಸ್ಎಸ್‌ ಸಂಸ್ಥೆಯ ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಒಟ್ಟು ಹಾಜರಾದ ೭೭೫ ವಿದ್ಯಾರ್ಥಿಗಳಲ್ಲಿ ೬೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟು ೮೦.೭೭% ಫಲಿತಾಂಶ ಪಡೆದಿದೆ.ಜಿಲ್ಲೆಯ ಟಾಪ್ ೧೦ ರಲ್ಲಿ ಐದು ವಿದ್ಯಾರ್ಥಿಗಳು ಈ ಕಾಲೇಜಿನವರಾಗಿದ್ದಾರೆ.

ವಾಣಿಜ್ಯ ವಿಭಾಗ
೧. ಅನನ್ಯ ಭಟ್(೯೮.೩೩) ಜಿಲ್ಲೆಗೆ ೨ನೇ ಸ್ಥಾನ,
೨ ಸಾಕ್ಷಿ ಕುಲಕರ್ಣಿ ಜಿಲ್ಲೆಗೆ (೯೭.೫) ೪ನೇ ಸ್ಥಾನ.

ಕಲಾ ವಿಭಾಗ
೧ ಕಲ್ಪನಾ ಬಲೂಟಿ (೯೭.೧೭) ಜಿಲ್ಲೆಗೆ ೩ನೇ ಸ್ಥಾನ,
೨. ರಂಜಿತಾ ಬಿರಾದಾರ (೯೬.೧೭) ಜಿಲ್ಲೆಗೆ ೪ನೇ ಸ್ಥಾನ
೩. ಸಮೀರ ಲಾಳಗೆ (೯೬.೧೭) ಜಿಲ್ಲೆಗೆ ೪ನೇ ಸ್ಥಾನ

ಒಟ್ಟು ೩೭ ವಿದ್ಯಾರ್ಥಿಗಳು ೪೭ ವಿವಿಧ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ಒಟ್ಟು ೧೮೩ ವಿದ್ಯಾರ್ಥಿಗಳು ೮೫%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. ೩೮೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಹಾಜರಾದ ಒಟ್ಟು ೧೨೦ ವಿದ್ಯಾರ್ಥಿಗಳಲ್ಲಿ ೪೧ ಡಿಸ್ಟಿಂಕ್ಷನ್‌, ೬೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಕಾಲೇಜು ೯೬.೬೭% ಫಲಿತಾಂಶ ಬಂದಿರುತ್ತದೆ. ಒಟ್ಟು ೦೮ ವಿದ್ಯಾರ್ಥಿಗಳು ೧೦ ವಿವಿಧ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು ೧೮೪ ವಿದ್ಯಾರ್ಥಿಗಳಲ್ಲಿ ೬೧ ಡಿಸ್ಟಿಂಕ್ಷನ್, ೯೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ೯೧.೮೫% ಫಲಿತಾಂಶ ಪಡೆದಿದೆ. ಒಟ್ಟು ೧೩ ವಿದ್ಯಾರ್ಥಿಗಳು ೧೯ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹಾಜರಾದ ಒಟ್ಟು ೪೭೧ ವಿದ್ಯಾರ್ಥಿಗಳಲ್ಲಿ ೮೧ ಡಿಸ್ಟಿಂಕ್ಷನ್, ೨೨೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ೭೨.೪೦% ಫಲಿತಾಂಶ ಪಡೆದಿದೆ. ಒಟ್ಟು ೧೫ ವಿದ್ಯಾರ್ಥಿಗಳು ೧೭ ವಿವಿಧ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.
ವಿಜ್ಞಾನ ವಿಭಾಗದ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು

1. ನೀಲವ್ವ ವಿರೂಪಾಕ್ಷಪ್ಪ ಸುಂಗರ್ -೯೬.೧೭% ( ೫೭೭ ಅಂಕಗಳು)
2. ಸೂರಜ್ -೯೫.೧೭% (೫೭೧ ಅಂಕಗಳು)
3. ಸಾಕ್ಷಿ ಹಿರೇಮಠ – ೯೫% (೫೭೦)
4. ಸೃಷ್ಟಿ ಸೊಗಲಾಡ್ -೯೪.೬೭% (೫೬೮)
5. ಕಲಾವತಿ ಬಿ ಪಲೋಟಿ -೯೪.೫೦ % (೫೬೭)
6. ಅಮನ್ ಶಾನಭಾಗ್ -೯೪.೩೩ (೫೬೬)
7. ಸಂತೃಪ್ತಿ ಚೇತ್ರೆ – ೯೪% (೫೬೪)
8. ಯಲ್ಲವ್ವ ಶಿವಾನಂದ ಪೂಜಾರ್ ೯೪% (೫೬೪)
9. ಛಾಯಾ ಉಮೇಶ್ ಕುರಿಯಾವರ್ ೯೩.೮೩% (೫೬೩)
10. ಸುಚೇತ್ ನಾಯಕ್ ೯೩.೮೩% (೫೬೩)

ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು

1. ಅನನ್ಯಾ ಯು ಭಟ್ (ಜಿಲ್ಲೆಗೆ ೨ನೇ) -೯೮.೩೩% ( ೫೯೦ ಅಂಕಗಳು)
2. ಸಾಕ್ಷಿ ಎಸ್ ಕುಲಕರ್ಣಿ (ಜಿಲ್ಲೆಗೆ ೪ನೇ) -೯೭.೫% (೫೮೫)
3. ಸಿದ್ದಪ್ಪ ಮಂಟಪ್ಪ ಸಜ್ಜನರ್ -೯೬.೮೩% (೫೮೧)
4. ಸೌಮ್ಯಾ ಶಂಕರ್ ಪರಮನ್ನವರ್- ೯೬.೮೩% (೫೮೧)
5. ಸಂಜನಾ ಪಿ ಕಲ್ಲಾಪುರ -೯೬.೬೭% (೫೮೦)
6. ಅದಿತಿ ಎಸ್ ಮಹೀಂದ್ರಾಕರ್ -೯೬.೩೩% (೫೭೮)
7. ನಿತ್ಯ ಶ್ರೀಕೃಷ್ಣ ಕವಠೇಕರ್ -೯೬.೩೩% (೫೭೮)
8. ವಸುಧಾ ಕಾಮತ್ –೯೬.೩೩% (೫೭೮)
9. ನಿಧಿ ಧೋಕಾ- ೯೬.೧೭% (೫೭೭)
10. ವಿಶ್ವೇಶ್ವರಯ್ಯ ಕೋರಿಮಠ- ೯೬.೧೭% (೫೭೭)

ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು

1. ಕಲ್ಪನಾ ಬಲೂಟಿ (ಜಿಲ್ಲೆಗೆ ೩ನೇ) – ೯೭.೧೭% (೫೮೩ ಅಂಕಗಳು)
2. ರಂಜಿತಾ ಬಿರಾದಾರ್ (ಜಿಲ್ಲೆಗೆ ೪ನೇ) -೯೬.೧೭% (೫೭೭)
3. ಸಮರ್ಥ ಮಹೇಶ್ ಲಾಲಾಗೆ (ಜಿಲ್ಲೆಗೆ 4 ನೇ) -೯೬.೧೭% (೫೭೭)
4 ಪೂಜಾ ಪಾಟೀಲ್ -೯೫.೩೩% (೫೭೨)
5 ಗಾಯತ್ರಿ ಇರಪ್ಪ ಚಾಪಗಾಂವ್ -೯೫.೧೭ % (೫೭೧)
6 ಕಲ್ಪನಾ ಎಸ್ ಕಾಳಂಗಿ -೯೪.೩೩% (೫೬೬)
7 ವಿಶ್ವನಾಥ ಕಂಬಾರ -೯೪.೧೭ (೫೬೫)
8 ರುತುಜಾ ಮಾರುತಿ ಖೋಟ್ -೯೩.೧೭% (೫೫೯)
9. ವೈಭವಿ ಶಿವಾನಂದ ಮುಸಲೆ -೯೩% (೫೫೮)
10. ಕಾವೇರಿ ಸುಬ್ಬಣ್ಣ ಚಾಕಲಬ್ಬಿ-೯೨.೮೩% (೫೫೭)
11. ಮಹಾಂತೇಶ ಕೆ ಗುಡಸಲಮನಿ –೯೨.೮೩% (೫೫೭)

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ನೀಲವ್ವ ವಿರೂಪಾಕ್ಷಪ್ಪ ಸುಣಗಾರ ೫೭೭/೬೦೦ (೯೬.೧೭%) ಅಂಕಗಳನ್ನು, ವಾಣಿಜ್ಯ ವಿಭಾಗದಲ್ಲಿ ಅನನ್ಯ ಭಟ್ ೫೯೦/೬೦೦ (೯೮.೩೩%) ಅಂಕಗಳನ್ನು ಹಾಗೂ ಕಲಾ ವಿಭಾಗದಲ್ಲಿ ಕಲ್ಪನಾ ಬಲೂಟಿ ೫೮೩/೬೦೦ (೯೭.೧೭%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಲ್ಲ ವಿಭಾಗಗಳಲ್ಲಿ ಉತ್ತಮ ಅಂಕಗಳನ್ನು ಪಡೆದ
ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಶಿಕ್ಷಣ ಸಮಿತಿಯಕಾರ್ಯಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಅಧ್ಯಕ್ಷರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮಿಗಳು, ಕಾರ್ಯದರ್ಶಿಗಳಾದ ಡಾ.ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ.ಅಜಿತಪ್ರಸಾದ ಶುಭ ಹಾರೈಸಿದ್ದಾರೆ. ಪ್ರಾಚಾರ್ಯರಾದ ಭಾರತಿ ಶಾನಭಾಗ ಮತ್ತು ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement