ಕ್ಯಾಮರಾ ಮುಂದೆ ಉದ್ಧವ್ ಠಾಕ್ರೆಗಾಗಿ ಕಣ್ಣೀರಿಟ್ಟ ಶಾಸಕ: ವಿಶ್ವಾಸ ಮತದ ವೇಳೆ ಸಿಎಂ ಏಕನಾಥ ಶಿಂಧೆಗೆ ಮತ | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಲಾಬಲ ಪರೀಕ್ಷೆಯ ಮುನ್ನಾದಿನ ರಾತ್ರಿ, ಉದ್ಧವ್‌ ಠಾಕ್ರೆ ಬಣಕ್ಕೆ ಸೇರಿದ ಮತ್ತೊಬ್ಬ ಶಿವಸೇನೆ ಶಾಸಕ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದೊಂದಿಗೆ ಸೇರಿಕೊಂಡರು, ಈಗಾಗಲೇ ಖಚಿತವಾದ ಬಹುಮತಕ್ಕೆ ಮತ್ತೊಬ್ಬರು ಸೇರಿದರು.
ಶಾಸಕ ಸಂತೋಷ್ ಬಂಗಾರ್ ಅವರು ಒಂದು ವಾರದ ಹಿಂದೆ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರು. ಆದರೆ, ನಿನ್ನೆ ತಡರಾತ್ರಿ ಸಂತೋಷ್ ಬಂಗಾರ್ ಅವರು ಹೊಸ ಮುಖ್ಯಮಂತ್ರಿ ತಂಗಿರುವ ಮುಂಬೈನ ಹೋಟೆಲ್‌ಗೆ ತಮ್ಮ ಬೆಂಬಲಿತ ಶಾಸಕರೊಂದಿಗೆ ತೆರಳಿದರು ಮತ್ತು ಅಧಿಕೃತವಾಗಿ ಪ್ರತಿಸ್ಪರ್ಧಿ ಪಾಳಯಕ್ಕೆ ಪಕ್ಷಾಂತರಗೊಂಡರು.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನದ ನಂತರ ಬಂಡಾಯದ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಇಂದು, ಸೋಮವಾರ ಸುಲಭವಾಗಿ ವಿಶ್ವಾಸ ಮತವನ್ನು ಗೆದ್ದರು.

ಜೂನ್ 24 ರಂದು, ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆ ಅವರ ಬಂಡಾಯ ಗುಂಪಿಗೆ ಸೇರದಂತೆ ಶಾಸಕರನ್ನು ತಡೆಯಲು ಪ್ರಯತ್ನ ನಡೆಸಿದ್ದಾಗ, ಸಂತೋಷ್ ಬಂಗಾರ ಅವರು ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಉದ್ಧವ್‌ ಠಾಕ್ರೆ ಅವರನ್ನು ಬೆಂಬಲಿಸಿ ಕೈಮುಗಿದು ಅಳುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ಬಂಗಾರ್ ಅವರು ಉದ್ಧವ್‌ ಠಾಕ್ರೆ ಅವರಿಗೆ “ದ್ರೋಹ” ಮಾಡಬೇಡಿ ಎಂದು ಕಣ್ಣೀರಿಡುತ್ತ ಹೇಳುವುದು ಮತ್ತು ಮರಳಿ ಪಕ್ಷಕ್ಕೆ ಬರುವಂತೆ ಏಕನಾಥ್ ಶಿಂಧೆ ಅವರಿಗೆ ಮನವಿ ಮಾಡುವುದನ್ನು ವೀಡಿಯೊ ತೋರಿಸಿದೆ. ಅವರ ಪಕ್ಕದಲ್ಲಿದ್ದ ಒಬ್ಬ ಬೆಂಬಲಿಗನು ಕರವಸ್ತ್ರದಿಂದ ಅವರ ಕೆನ್ನೆಯನ್ನು ಒರೆಸಿದ್ದನ್ನು ವೀಡಿಯೊ ತೋರಿಸುತ್ತದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಬಾಳಾಸಾಹೇಬ್ ಠಾಕ್ರೆ, ಉದ್ಧವ್-ಜಿ ಠಾಕ್ರೆ ತುಮ್ ಆಗೇ ಬಧೋ, ಹಮ್ ತುಮ್ಹಾರೆ ಸಾಥ್ ಹೇ (ಉದ್ಧವ್ ಠಾಕ್ರೆಯವರೇ, ನಾವು ನಿಮ್ಮೊಂದಿಗಿದ್ದೇವೆ)” ಎಂದು ಶಾಸಕರು ಘೋಷಣೆ ಕೂಗಿದರು, ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮತ್ತು ಹರ್ಷೋದ್ಗಾರ ಮಾಡಿದರು.
ಆದರೆ, ಇಂದು ಬೆಳಿಗ್ಗೆ, ಏಕನಾಥ್ ಶಿಂಧೆ ಅವರ ಪರವಾಗಿ ಮತ ಚಲಾಯಿಸಿದಾಗ ಬಂಗಾರ್ ಅವರತ್ತ ಪ್ರತಿಪಕ್ಷದವರು ಘೋಷಣೆ ಕೂಗಿದರು. ಮತ್ತೊಬ್ಬ ಶಾಸಕ ಶ್ಯಾಮಸುಂದರ್ ಶಿಂಧೆ ಕೂಡ ಕೊನೆಯ ಕ್ಷಣದಲ್ಲಿ ಶಿಂಧೆ ಬಣಕ್ಕೆ ಹಾರಿದರು.
ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು 286 ಮತಗಳಲ್ಲಿ 164 ಮತಗಳನ್ನು ಪಡೆದು ಜಯಗಳಿಸಿದರು.
ಠಾಕ್ರೆ ತಂಡದಿಂದ ಹೆಚ್ಚಿನ ಶಿವಸೇನೆ ಶಾಸಕರನ್ನು ಸೆಳೆದುಕೊಂಡ ನಂತರ, ಅವರು ಕಳೆದ ಶುಕ್ರವಾರ ಬಿಜೆಪಿಯ ಬೆಂಬಲದೊಂದಿಗೆ ಅಧಿಕಾರವನ್ನು ಪಡೆದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement