
ಕೊಲಂಬೊ: ಶನಿವಾರ ಕೊಲಂಬೊದ ತಮ್ಮ ಮನೆಯನ್ನು ಪ್ರತಿಭಟನಾಕಾರರು ಸುತ್ತುವರಿದ ನಂತರ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾದ ಅಧ್ಯಕ್ಷ ಗೋತಾಬಯ ರಾಜಪಕ್ಸೆ ಅವರು ಶನಿವಾರ ರಾಜಧಾನಿಯಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದರು ಎಂದು ಉನ್ನತ ರಕ್ಷಣಾ ಮೂಲವು ಎಎಫ್ಪಿಗೆ ತಿಳಿಸಿದೆ, ದೂರದರ್ಶನದ ದೃಶ್ಯಾವಳಿಗಳು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಅಧ್ಯಕ್ಷರ ಮನೆಯ ಕಾಂಪೌಂಡ್ಗೆ ನುಗ್ಗುತ್ತಿರುವುದನ್ನು ತೋರಿಸಿದವು.
ಅಧ್ಯಕ್ಷರನ್ನು ಸುರಕ್ಷತೆಗಾಗಿ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ. ಆಕ್ರೋಶಗೊಂಡ ಜನಸಮೂಹ ಅಧ್ಯಕ್ಷರ ಭವನವನ್ನು ಅತಿಕ್ರಮಿಸುವುದನ್ನು ತಡೆಯಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು.

ಉನ್ನತ ವಕೀಲರ ಸಂಘ, ಮಾನವ ಹಕ್ಕುಗಳ ಗುಂಪುಗಳು ಹಾಗೂ ರಾಜಕೀಯ ಪಕ್ಷಗಳಿಂದ ನಿರಂತರ ಒತ್ತಡಕ್ಕೆ ಒಳಗಾದ ನಂತರ, ಶನಿವಾರ ಯೋಜಿತ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಮುಂಚಿತವಾಗಿ, ಕೊಲಂಬೊ ಸೇರಿದಂತೆ ದೇಶದ ಪಶ್ಚಿಮ ಪ್ರಾಂತ್ಯದ ಏಳು ವಿಭಾಗಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಅನ್ನು ಶ್ರೀಲಂಕಾ ಪೊಲೀಸರು ತೆಗೆದುಹಾಕುವ ಮಧ್ಯೆ ಈ ಬೆಳವಣಿಗೆ ನಡೆದಿದೆ.
ಪಶ್ಚಿಮ ಪ್ರಾಂತ್ಯದ ನೆಗೊಂಬೊ, ಕೆಲನಿಯಾ, ನುಗೆಗೋಡ, ಮೌಂಟ್ ಲ್ಯಾವಿನಿಯಾ, ಕೊಲಂಬೊ ಉತ್ತರ, ಕೊಲಂಬೊ ದಕ್ಷಿಣ ಮತ್ತು ಕೊಲಂಬೊ ಸೆಂಟ್ರಲ್ ಸೇರಿದಂತೆ ಏಳು ಪೊಲೀಸ್ ವಿಭಾಗಗಳಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಮುಂದಿನ ಸೂಚನೆ ಬರುವವರೆಗೆ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಲಂಕಾದ ಬಾರ್ ಅಸೋಸಿಯೇಷನ್ ಪೊಲೀಸ್ ಕರ್ಫ್ಯೂವನ್ನು ಪ್ರತಿಭಟಿಸಿತು, ಇದು “ಕಾನೂನುಬಾಹಿರ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಬಿಕ್ಕಟ್ಟು ಪೀಡಿತ ಶ್ರೀಲಂಕಾದಲ್ಲಿ ನಡೆದ ಅತಿದೊಡ್ಡ ಸರ್ಕಾರಿ ವಿರೋಧಿ ಮೆರವಣಿಗೆಗಳಲ್ಲಿ ಸಾವಿರಾರು ಜನರನ್ನು ನಿಯಂತ್ರಿಸಲು ವಾಣಿಜ್ಯ ರಾಜಧಾನಿಯಲ್ಲಿ ಪ್ರತಿಭಟನಾಕಾರರ ಮೇಲೆ ಶ್ರೀಲಂಕಾ ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಕೆಲವೇ ದಿನಗಳಲ್ಲಿ ಇದು ವರದಿಯಾಗಿವೆ.
ಶ್ರೀಲಂಕಾದಾದ್ಯಂತ ಬಸ್ಗಳು, ರೈಲುಗಳು ಮತ್ತು ಟ್ರಕ್ಗಳಲ್ಲಿ ಆಗಮಿಸಿದ ಸಾವಿರಾರು ಪ್ರತಿಭಟನಾಕಾರರು ಆರ್ಥಿಕ ನಾಶದಿಂದ ಶ್ರೀಲಂಕಾವನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 2.2 ಕೋಟಿ ಜನರಿರುವ ದ್ವೀಪ ರಾಷ್ಟ್ರ ಶ್ರೀಲಂಕಾವು ತೀವ್ರ ವಿದೇಶಿ ವಿನಿಮಯ ಕೊರತೆಯಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದು ಇಂಧನ, ಆಹಾರ ಮತ್ತು ಔಷಧಿಗಳ ಅಗತ್ಯ ಆಮದುಗಳಿಗೆ ಹಣಕಾಸು ಇಲ್ಲದೆ ದೇಶ ಏಳು ದಶಕಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಗೆ ಒಳಗಾಗಿದೆ.
ಪ್ರತಿಭಟನಕಾರರು ರಾಷ್ಟ್ರಧ್ವಜಗಳನ್ನು ಹಿಡಿದು ‘ಗೋತ ಗೋ ಹೋಮ್’ ಎಂದು ಕೂಗಿದರು. ಅವರು ಕೊಲಂಬೊದ ರಮಣೀಯ ಕರಾವಳಿಯ ಸಮೀಪದಲ್ಲಿರುವ ಅಧ್ಯಕ್ಷರ ಭವನ ಮತ್ತು ಹಣಕಾಸು ಸಚಿವಾಲಯ ಸೇರಿದಂತೆ ಪ್ರಮುಖ ಕಟ್ಟಡಗಳ ಸುತ್ತಲಿನ ಪೊಲೀಸ್ ಮತ್ತು ಮಿಲಿಟರಿ ಭದ್ರತಾ ಕಾರ್ಡನ್ ಮಧ್ಯೆ ಸಾವಿರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.


ನಿಮ್ಮ ಕಾಮೆಂಟ್ ಬರೆಯಿರಿ