ಕನೌಜ್: ವಿಲಕ್ಷಣ ಘಟನೆಯೊಂದರಲ್ಲಿ, 45 ವರ್ಷದ ಬಿಹಾರಿ ಲಾಲ್, ದಿನಕ್ಕೆ 600-800 ರೂ ಗಳಿಸುವ ದಿನಗೂಲಿ, ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತನ್ನ ಜನ್ ಧನ್ ಖಾತೆಯಿಂದ 100 ರೂ.ಗಳನ್ನು ಹಿಂಪಡೆಯಲು ಹೋದಾಗ ಅವರು ಶಾಕ್ಗೆ ಒಳಗಾದರು. ಯಾಕೆಂದರೆ ಅವರ ಖಾತೆಯಲ್ಲಿ 2,700 ಕೋಟಿ ರೂ.ಗಳಿತ್ತು.
ಬಿಹಾರಿ ಲಾಲ್ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾರೆ. ಖಾತೆಯನ್ನು ಮೂರು ಬಾರಿ ಪರಿಶೀಲಿಸಲು ಬ್ಯಾಂಕ್ ಅಧಿಕಾರಿಯನ್ನು ಕೇಳಿದ್ದೇನೆ ಎಂದು ಅವರು ಹೇಳಿದರು. ಅಧಿಕೃತ ಬ್ಯಾಂಕ್ ದಾಖಲೆಗಳಲ್ಲಿ ಅವರ ಹೆಸರಿದ್ದ ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ತೋರಿಸಿದೆ ಎಂದು ಅಧಿಕಾರಿ ಹೇಳಿದರು.
ನಂತರ ನಾನು ನನ್ನ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಕೇಳಿದೆ, ನಂತರ ಅವರು ಅದನ್ನು ಮೂರು ಬಾರಿ ಪರಿಶೀಲಿಸಿದರು. ನಾನು ಅದನ್ನು ನಂಬಲು ಸಾಧ್ಯವಾಗದಿದ್ದರೂ, ಅವರು ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದು ನನಗೆ ಕೊಟ್ಟರುಎಂದು ಅವರು ಹೇಳಿದರು.
ಬಿಹಾರಿ ಲಾಲ್ ರಾಜಸ್ಥಾನದ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡಿ ದಿನಕ್ಕೆ 600 ರಿಂದ 800 ರೂ.ಗಳಿಸುತ್ತಿದ್ದರು. ಮಾನ್ಸೂನ್ನಿಂದಾಗಿ ಇಟ್ಟಿಗೆ ಗೂಡು ಘಟಕವನ್ನು ಮುಚ್ಚಿದ್ದರಿಂದ ಅವರು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿದ್ದರು.
ಇಷ್ಟೊಂದು ಮೊತ್ತದ ಹಣ ನೋಡಿ, ನಾನು ಖಾತೆಯನ್ನು ಮೂರು ಬಾರಿ ಪರಿಶೀಲಿಸಲು ಬ್ಯಾಂಕ್ ಅಧಿಕಾರಿಗೆ ಹೇಳಿದ್ದೇನೆ. ನಂತರವೂ ನನ್ನ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಕೇಳಿದೆ, ನಂತರ ಅವರು ಅದನ್ನು ಮೂರು ಬಾರಿ ಪರಿಶೀಲಿಸಿದರು. ನಾನು ನಂಬಲು ಸಾಧ್ಯವಾಗದಿದ್ದರೂ, ಅವರು ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದು ನನಗೆ ಕೊಟ್ಟರು. ನನ್ನ ಖಾತೆಯಲ್ಲಿ 2,700 ಕೋಟಿ ರೂಪಾಯಿ ಇರುವುದನ್ನು ನಾನು ನೋಡಿ ಕಂಗಾಲಾದೆ ಎಂದು ಬಿಹಾರಿ ಲಾಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಆದಾಗ್ಯೂ, ಅವರ ಸಂತೋಷವು ಅಲ್ಪಾವಧಿಯದ್ದಾಗಿತ್ತು ಏಕೆಂದರೆ ಅವರು ಮನೆಗೆ ತಲುಪುತ್ತಿದ್ದಂತೆ, ಅವರ ಖಾತೆಯಲ್ಲಿ ಕೇವಲ 126 ರೂ.ಗಳಿದ್ದು, ಹಿಂದಿನ ಅಷ್ಟೊಂದು ಮೊತ್ತವು ಸಿಸ್ಟಮ್ ದೋಷದಿಂದ ಬಂದಿದೆ ಎಂದು ತಿಳಿಸಲಾಯಿತು.
ಇದು ಬ್ಯಾಂಕಿಂಗ್ ದೋಷದಂತೆ ತೋರುತ್ತಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಅಭಿಷೇಕ್ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು. ಮುಂಜಾಗ್ರತಾ ಕ್ರಮವಾಗಿ ಕೆಲಕಾಲ ಬಿಹಾರಿ ಲಾಲ್ ಖಾತೆಯನ್ನು ಸೀಜ್ ಮಾಡಲಾಯಿತು. ಬಿಹಾರಿ ಲಾಲ್ ಕೆಲವು ಗಂಟೆಗಳ ಕಾಲ ಮಾತ್ರ ಕೋಟ್ಯಾಧಿಪತಿಯಾದರು.
ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ, ಬಿಹಾರದ ಕತಿಹಾರ್ನಲ್ಲಿ ಇಬ್ಬರು ಹುಡುಗರ ಬ್ಯಾಂಕ್ ಖಾತೆಗಳಿಗೆ ಭಾರಿ ಮೊತ್ತದ ಹಣ ಬಂದಿದ್ದು ಇಡೀ ಗ್ರಾಮವನ್ನು ಆಶ್ಚರ್ಯಗೊಳಿಸಿತು. 6ನೇ ತರಗತಿ ವಿದ್ಯಾರ್ಥಿಗಳಾದ ಗುರುಚರಣ್ ಬಿಸ್ವಾಸ್ ಮತ್ತು ಆಶಿಶ್ ಕುಮಾರ್ ಅವರ ಖಾತೆಯಲ್ಲಿ ಜಮಾ ಆಗಿದ್ದ ಮೊತ್ತ 900 ಕೋಟಿ ರೂ.ಗಳಿಗೂ ಹೆಚ್ಚು ! ಶಾಲಾ ಸಮವಸ್ತ್ರಕ್ಕಾಗಿ ರಾಜ್ಯ ಸರ್ಕಾರವು ಠೇವಣಿ ಇಟ್ಟಿರುವ ಮೊತ್ತವನ್ನು ಪರಿಶೀಲಿಸಲು ಹುಡುಗರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಸ್ಥಳೀಯ ಕೇಂದ್ರೀಕೃತ ಪ್ರಿಸೆಸಿಂಗ್ ಕೇಂದ್ರಕ್ಕೆ (ಸಿಪಿಸಿ) ಭೇಟಿ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು. ಆದರೆ, ಭಾರೀ ಮೊತ್ತದ ಹಣದ ವಿಚಾರ ತಿಳಿದ ಬಳಿಕ ಅವರು ಬೆಚ್ಚಿಬಿದ್ದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ