ಸಿದ್ದಾಪುರ: ಆಗಸ್ಟ್‌ 6ರಂದು ʼಮಾಸದ ನೆನಪುಗಳುʼ ಕೃತಿ ಬಿಡುಗಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಪತ್ರಕರ್ತ ಗಂಗಾಧರ ಕೊಳಗಿ ಅವರ ಮಾಸದ ನೆನಪುಗಳು ಕೃತಿ ಬಿಡುಗಡೆ ಸಮಾರಂಭ ಆಗಸ್ಟ್‌ 6 ರಂದು, ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಿದ್ದಾಪುರದ ಲಯನ್ಸ್‌ ಬಾಲಭವನದಲ್ಲಿ ನಡೆಯಲಿದೆ.
ಸಾಹಿತಿಗಳು ಹಾಗೂ ವಿಮರ್ಷಕರಾದ ಬೆಳಗಾವಿ ಡಾ.ಮೈತ್ರೇಯಿಣಿ ಗದಿಗೆಪ್ಪ ಗೌಡ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎನ್‌ ವಾಸರೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಸಿದ್ದಾಪುರ ಸುಬ್ರಾಯ ಮತ್ತಿಹಳ್ಳಿ ಅವರು ಕೃತಿ ಪರಿಚಯ ಮಾಡಲಿದ್ದಾರೆ. ಮುಖ್ಯಅತಿಥಿಗಳಾಗಿ ಸಂಸ್ಕೃತಿ ಸಂಪದದ ಮುಖ್ಯಸ್ಥ ವಿಜಯ ಹೆಗಡೆ ದೊಡ್ಮನೆ ಹಾಗೂ ಗೌರವ ಅತಿಥಿಗಳಾಗಿ ಸಿದ್ದಾಪುರ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಹಾಗೂ ಸಿದ್ದಾಪುರದ ಅದ್ಯೋತ್‌ ವೆಬ್‌ ನ್ಯೂಸ್‌ನ ಗಣೇಶ ಭಟ್‌ ಅವರು ಆಗಮಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ ಸಿದ್ದಾಪುರ ಘಟಕ, ಪ್ರಯೋಗ ಸ್ವಯಂ ಸೇವಾ ಸಂಸ್ಥೆ ಹಾಗೂ ಅದ್ಯೋತ್‌ ವೆಬ್‌ನ್ಸೂಸ್‌ ಸಹಕಾರ ನೀಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement