ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಅಂತ್ಯವೋ..? ಮುಂದುವರಿಕೆಯೋ…? : ಬಿಹಾರ ಸಿಎಂ ನಿತೀಶಕುಮಾರ ಇಂದು ಕರೆದ ಜೆಡಿಯು ಪ್ರಮುಖರ ಸಭೆಗೆ ಎಲ್ಲಿಲ್ಲದ ಮಹತ್ವ

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ, ಆಗಸ್ಟ್ 9 ರಂದು ಜನತಾ ದಳ (ಯುನೈಟೆಡ್) ಶಾಸಕರು ಮತ್ತು ಸಂಸದರ ಪ್ರಮುಖ ಸಭೆ ಸಭೆ ಕರೆದಿದ್ದು, ಬಿಜೆಪಿಯೊಂದಿಗೆ ಜೆಡಿಯು ಸಂಬಂಧಗಳು ಮುರಿದು ಬೀಳುವ ಕಾಲ ಸನ್ನಿಹಿತವಾಗಿದೆ ಎಂಬ ವದಂತಿಗಳ ನಡುವೆ ಅವರು ಈ ಸಭೆ ಕರೆದಿದ್ದರಿಂದ ಅದಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಬಿಜೆಪಿಯ ನಿಕಟವರ್ತಿ ಎಂದು ನಂಬಲಾದ ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್‌ ಅವರ ರಾಜೀನಾಮೆ ನಂತರ ಪ್ರಸ್ತುತ ಬಿಕ್ಕಟ್ಟು ಉಲ್ಬಣಿಸಿದೆ.
ಸೋಮವಾರ, ಜನತಾ ದಳದ ಕಟ್ಟಾ ಪ್ರತಿಸ್ಪರ್ಧಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್ ಮತ್ತು ಎಡ ಪಕ್ಷಗಳುಜೆಡಿಯು ಬಿಜೆಪಿಯನ್ನು ತೊರೆದರೆ ಅದಕ್ಕೆ ಬೆಂಬಲ ನೀಡುವುದಾಗಿ ಹೇಳಿವೆ. ಅಲ್ಲದೆ, ಪ್ರಮುಖ ಸಭೆಗೆ ಒಂದು ದಿನ ಮುಂಚಿತವಾಗಿ, ನಿತೀಶ್ ಕುಮಾರ್ ನೇತೃತ್ವದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಸಂಘಟನೆಯ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಜೆಡಿಯು ಹೇಳಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ನಡೆಯಲಿರುವ ಜೆಡಿಯು ಸಭೆಯ ಮುನ್ನಾದಿನವಾದ ಸೋಮವಾರ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದರು. ಸುಮಾರು ಏಳು ನಿಮಿಷಗಳ ಕಾಲ ನಡೆದ ಮಾತುಕತೆಯು ಪ್ರಸ್ತುತ ಬಿಕ್ಕಟ್ಟಿಗೆ ಯಾವುದೇ ಸ್ಪಷ್ಟವಾದ ಪರಿಹಾರವನ್ನು ನೀಡಲಿಲ್ಲ ಎಂದು ಹೇಳಲಾಗಿದೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಬೇಡಿ ಮತ್ತು ನಾಳೆ ನಿತೀಶ್ ಕುಮಾರ್ ಅವರ ನಿರ್ಧಾರಕ್ಕಾಗಿ ಕಾಯುವಂತೆ ಬಿಜೆಪಿ ತನ್ನ ನಾಯಕರಿಗೆ ಸೂಚನೆ ನೀಡಿದೆ.
ಬಿಜೆಪಿಯೊಂದಿಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ವರದಿಗಳ ನಡುವೆ, ಜೆಡಿಯು ಸಂಸದರು ಮತ್ತು ಶಾಸಕರನ್ನು ಮಂಗಳವಾರ ಪಾಟ್ನಾದಲ್ಲಿ ಸೇರಲು ತಿಳಿಸಲಾಗಿದೆ. ಮುಂಗಾರು ಅಧಿವೇಶನಕ್ಕಾಗಿ ದೆಹಲಿಯಲ್ಲಿರುವ ಸಂಸದರು ಪಾಟ್ನಾದತ್ತ ಮುಖ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಪಕ್ಷವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದನ್ನು ಪ್ರತಿಯೊಬ್ಬ ಜೆಡಿಯು ಸದಸ್ಯರು ಸ್ವೀಕರಿಸುತ್ತಾರೆ ಎಂದು ಪಕ್ಷದ ವಕ್ತಾರ ಕೆ.ಸಿ. ತ್ಯಾಗಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

ಜೆಡಿಯುನ ಉನ್ನತ ನಾಯಕ ಆರ್‌ಸಿಪಿ ಸಿಂಗ್ ಪಕ್ಷವನ್ನು ತೊರೆದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಸಿಪಿ ಸಿಂಗ್ ವಿರುದ್ಧ ಅವರದೇ ಪಕ್ಷವಾದ ಜೆಡಿಯು ಭ್ರಷ್ಟಾಚಾರದ ಆರೋಪ ಹೊರಿಸಿತ್ತು.
ಆರ್‌ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ್ ತಿವಾರಿ ಸೋಮವಾರ, ಎರಡೂ ಪಕ್ಷಗಳು ತಮ್ಮ ತಮ್ಮ ಶಾಸಕರ ಸಭೆಗಳನ್ನು ಕರೆದಿರುವುದು ಪರಿಸ್ಥಿತಿ ಅಸಾಧಾರಣವಾಗಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಿತೀಶ್ ಅವರು ಎನ್‌ಡಿಎ ತ್ಯಜಿಸಲು ನಿರ್ಧರಿಸಿದರೆ, ಅಪ್ಪಿಕೊಳ್ಳುವುದನ್ನು ಬಿಟ್ಟು ನಮಗೆ ಯಾವ ಆಯ್ಕೆ ಇದೆ. ಬಿಜೆಪಿ ವಿರುದ್ಧ ಹೋರಾಡಲು ಆರ್‌ಜೆಡಿ ಬದ್ಧವಾಗಿದೆ. ಮುಖ್ಯಮಂತ್ರಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರೆ, ನಾವು ಅವರನ್ನು ಕರೆದುಕೊಂಡು ಹೋಗಬೇಕಾಗುತ್ತದೆ ಎಂದು ತಿವಾರಿ ಹೇಳಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊಸ ಸರ್ಕಾರ ರಚಿಸಲು ಆರ್‌ಜೆಡಿ, ಜೆಡಿಯು ಮತ್ತು ಕಾಂಗ್ರೆಸ್‌ನ ಒಟ್ಟು ಬಲ ಸಾಕಾಗುತ್ತದೆ.

ಜಾತಿ ಗಣತಿ ಮತ್ತು ಜನಸಂಖ್ಯೆ ನಿಯಂತ್ರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜೆಡಿಯು ಮತ್ತು ಬಿಜೆಪಿ ನಡುವಿನ ಹಲವಾರು ಭಿನ್ನಾಭಿಪ್ರಾಯಗಳ ನಂತರ ಕಳೆದ ಕೆಲವು ತಿಂಗಳುಗಳಿಂದ ಸಂಬಂಧ ಹಳಸಿದೆ. ಭಾನುವಾರದ ನೀತಿ ಆಯೋಗದ ಪ್ರಮುಖ ಸಭೆಗೆ ನಿತೀಶಕುಮಾರ್ ಅವರು ಗೈರಾಗಲು ನಿರ್ಧರಿಸಿದ ನಾಲ್ಕನೇ ಸಭೆಯಾಗಿದ್ದು, ಜೆಡಿಯು-ಬಿಜೆಪಿ ಮೈತ್ರಿಯೊಳಗೆ ಬಿರುಕು ವಿಸ್ತರಿಸುವ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬರುವಂತಾಯಿತು.
ಬಿಹಾರದ ಎಡಪಕ್ಷವಾದ ಸಿಪಿಐಎಂಎಲ್ (ಲಿಬರೇಶನ್) ಕೂಡ ಜೆಡಿಯು ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡರೆ ಬೆಂಬಲಿಸುವುದಾಗಿ ಸೂಚಿಸಿದೆ. ಎಡಪಕ್ಷಗಳು, ಆರ್‌ಜೆಡಿ ಮತ್ತು ಕಾಂಗ್ರೆಸ್ ಭಾಗವಾಗಿರುವ ‘ಮಹಾಘಟಬಂಧನ್’ 2020 ರ ರಾಜ್ಯ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆದ್ದಿತ್ತು, ಆರ್‌ಜೆಡಿ 75 ಸ್ಥಾನಗಳನ್ನು ಪಡೆದುಕೊಂಡು ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement